"ನಂಬಿಕೆಯೇ ನಂಬಲೇ ನಾ ನಿನ್ನ "

ಬಸ್ ಬರೋ ಟೈಮ್ ಆಯಿತು ಏಳೋ ..ಅತ್ತ ಅಮ್ಮನ ಕೂಗು ಕೇಳಿದಾಕ್ಷಣ ...ಅಬ್ಬಾ ಎಷ್ಟು ಹೊತ್ತು ಮಲಗಿ ಬಿಟ್ಟೆ ಎಂದು ಬಿರ ಬಿರನೆ ಎದ್ದು ಟೈಮ್ ನೋಡಿದೆ ...ಆಗಲೇ ೪.೧೫ ಆಗಿತ್ತು .೫ ಕ್ಕೆ ಕೊನೆ ಬಸ್ ನಮ್ಮೂರಿಂದ ತೀರ್ಥಹಳ್ಳಿಗೆ (ಶಿವಮೊಗ್ಗದಿಂದ ರಾತ್ರಿ ೧೦ ಕ್ಕೆ ಹೊರಡುವುದಾದರು,ಬಸ್ ವ್ಯವಸ್ತೆ ಇಲ್ಲದ ಕಾರಣ ಮನೆಇಂದ ಬೇಗನೆ ಹೊರಡಬೇಕಾದ ಪರಿಸ್ಥಿತಿ ).ಇನ್ನು ಏನು ಪ್ಯಾಕ್ ಮಾಡ್ಕೊಂಡೆ ಇಲ್ವಲ್ಲೋ ಸೋಮಾರಿ ಎಂದು ಹುಸಿ ಕೋಪ ತೋರಿಸುತ್ತಲೇ ಅಮ್ಮನೇ ಎಲ್ಲ ನನ್ನ ಬ್ಯಾಗ್ಗೆ ತುಂಬುತ್ತಿದ್ದರು ....ನಾಡಿದ್ದು ಹೇಗೂ ಬರ್ತಾನಲ್ಲ ೧ ವಾರಕ್ಕೆ ಎಸ್ಟ್ ಬೇಕೋ ಅಸ್ಟು ಬಟ್ಟೆ ತುಂಬು ಸಾಕು , ಎದುರುಗಡೆ ಮನೆ ಕೆಲಸ ಮಾಡಿಸುತಿದ್ದ ಅಪ್ಪನ ಅಪ್ಪಣೆ ಅಮ್ಮನಿಗೆ(ಹಿಂದಿನ ದಿನವಸ್ಟೇ ಅಕ್ಕನ ಮದುವೆಮುಗಿಸಿಕೊಂಡು ಬಂದಿದ್ದರಿಂದ ಸ್ವಲ್ಪ ತಿಂಡಿಯೂ ಇತ್ತು ,ಅದನ್ನು ಅಮ್ಮ ತುಂಬುತ್ತಿದ್ದರು ) .
ಹಾಸಿಗೆ ಬಿಡಲು ಮನಸಿಲ್ಲದಿದ್ದರು ಸಮಯದ ಅರಿವಾಗಿ ಬೇಗನೆ ತಯಾರಿಯಾದೆ.ಅಪ್ಪ ಅಮ್ಮನ ಕಾಲಿಗೆ ನಮಸ್ಕರಿಸಿ ,ನನ್ನ ಯಮ ಗಾತ್ರದ ಬ್ಯಾಗ್ ಹೆಗಲ ಮೇಲೇರಿಸಿ ಹೊರಟೆ .ಪ್ರತಿ ಸಲಿ ಮನೆಗೆ ಬಂದಾಗಲು ಸ್ವಲ್ಪ ದೂರ ನನ್ನೊಟ್ಟಿಗೆ ಬರುವುದು ಅಮ್ಮನ ಅಬ್ಯಾಸ (ಮನೆಇಂದ ಬಸ್ ಸ್ಟಾಪ್ ಗೆ ೧ ಕಿ ಮಿ ಕಾಲ್ನಡಿಗೆ ).
ಹಳ್ಳಿ ಎಂದ ಮೇಲೆ ಕೇಳಬೇಕೆ ದಾರಿ ಯಲ್ಲಿ ಸಿಗುವ ಪ್ರತಿಯೋಬ್ಬರಿಂದಲೂ ಒಂದೇ ಪ್ರಶ್ನೆ ಹೊರಟಿರ ಅಪ್ಪು? (ಸಾಮಾನ್ಯವಾಗಿ ನಮ್ಮ ಕಡೆ ಎಲ್ಲ ಬ್ರಾಹ್ಮಣ ಹುಡುಗರಿಗೂ ಅಪ್ಪು ಎಂದೇ ಸಂಬೋದಿಸುತ್ತಾರೆ ) ಹ ಹ .ಎಂದು ಉತ್ತರಿಸುತ್ತಲೇ ಕೊನೆಗೂ ನನ್ನ ಎಂದಿನ ಚಾಳಿಅಂತೆ ಓಡಿಬಂದೆ ಬಸ್ ಹತ್ತಿದ್ದುಆಯಿತು .
ಕೊನೆ ಬಸ್ ಅದ್ದರಿಂದ ಸ್ವಲ್ಪ ರಶ್ ಇತ್ತು .ಅದ್ರು ಒಂದು ಸೀಟು ಗಿಟ್ಟಿಸುವಲ್ಲಿ ಸಪಲನಾದೆ.ಅಂತು ದಡ ಬಡ ದಡ ಬಡ ಸದ್ದು ಮಾಡುತ್ತ ಬಸ್ಸುತೀರ್ಥಹಳ್ಳಿ ತಲುಪಿತು .ಅಲ್ಲಿಂದ ಶಿವಮೊಗ್ಗ ಬಸ್ಸು ಹತ್ತಿ ಕುಳಿತೆ .
ತೀರ್ಥಹಳ್ಳಿ ,ಶಿವಮೊಗ್ಗ ದಾರಿ ಎಂದ ಮೇಲೆ ಕೇಳಬೇಕೆ .ದಾರಿ ಯುದ್ದಕ್ಕು ಹಳ್ಳ ,ಕಾಡು.ಆಲ್ ಅಲ್ಲಿ ರಸ್ತೆಯ ಜೊತೆ ಮಾತು ಆಡುತ್ತಾ ಹರಿವ ತುಂಗೆ ,ಗಜರಾಜನ ಬಿಡು ಸಕ್ರೆಬೈಲು ,ಪಕ್ಷಿಗಳ ತವರು ಮಂಡಗದ್ದೆ ,ಆಲ್ ಅಲ್ಲಿ ಸಿಗುವ ಅಡಿಕೆ ತೋಟ ,ಮನುಷ್ಯನ ಶಕ್ತಿ ಪ್ರದರ್ಶನದ ಪ್ರತೀಕ ಗಾಜನೂರು ಅಣೆಕಟ್ಟು ,ಹೊಸಹಳ್ಳಿ (ಸಂಸ್ಕ್ರತದ ತವರೂರಾದ ಮತ್ತುರಿನ ಅವಳಿ ಗ್ರಾಮ ).ಹೀಗೆ ಕಣ್ಣಿಗೆ ಹಬ್ಬ .
ಹಾಗೆಯೆ ದಿಗಂತ ದಲ್ಲಿ ಸೂರ್ಯ ತನ್ನ ಕೆಲಸ ಮುಗೀತು ಎಂಬ ಸಂತೋಷ ದೊಂದಿಗೆ ಮನೆಗೆ ಹೊರಡುವ ಅವಸರದಲ್ಲಿದ್ದ .
ಒಮ್ ಒಮ್ಮೆ ಅನ್ನಿಸಿದ್ದುಂಟು ಸೂರ್ಯನಿಗೂ ರಾತ್ರಿ ಪಾಳಿ ಇದ್ದಿದ್ದರೆ (ಎಂಥ ತರ್ಲೆ ಪ್ರಶ್ನೆ ಎಂದು ಸುಮ್ಮನಾಗುತ್ತಿದ್ದೆ ).
ದಡಕ್ ಎಂಬ ಬ್ರೇಕ್ನ ಸದ್ದು ಆಲೋಚನಾ ಲಹರಿಯಲ್ಲಿದ್ದ ನನ್ನನ್ನು ವಾಸ್ತವಕ್ಕೆ ತಂದು ನಿಲ್ಲಿಸಿತು ,ನಾನು ಶಿವಮೊಗ್ಗ ತಲುಪಿಆಗಿತ್ತು ,ಸಮಯ ಸರಿಯಾಗಿ ೮.೩೦ ...
೧೦.೩೦ ಕ್ಕೆ ಬಸ್ ಅಲ್ಲಿಯವರೆಗೆ ಏನು ಮಾಡುವುದು ಎಂದು ಯೋಚಿಸುತ್ತಿರುವಾಗಲೇ ,ಹೊಟ್ಟೆಯ ನೆನಪಾಗಿ ಅಲ್ಲಿಯೇ ಎದುರುಗಿದ್ದ ಉಡುಪಿ ಬ್ರಾಹ್ಮಣರ ಹೋಟೆಲ್ ಒಳ ಹೊಕ್ಕೆ .........
ಊಟ ಮುಗಿಸಿ ಬಸ್ ಸ್ಟ್ಯಾಂಡ್ ಒಳಗಡೆ ಬಂದೆ ಹಾಗೆಯೇ ಒಂದು ಸುತ್ತು ಹಾಕಿ ಅಲ್ಲೇ ಹಾಕಿದ್ದ ಬೆಂಚ್ ಮೇಲೆ ಕುಳಿತೆ .ಸ್ವಲ್ಪ ಸಮಯ ಕಳೆದಿರಬೇಕು ಯಾರೋ ಒಬ್ಬ ವ್ಯಕ್ತಿ ನನ್ನ ಪಕ್ಕ ಬಂದು ಕುಳಿತ (ವಯಸ್ಸು ಸುಮಾರು ೨೧ ರಿಂದ ೨೪ ಇರಬೇಕು ಅಸ್ಟೆ).ನಾನೋ ಈ ಲೋಕದ ಅರಿವೇ ಇಲ್ಲದಂತೆ ಯಾವೊದೋ ಸಿನಿಮಾ ಹಾಡು ಗುನುಗುತ್ತಿದ್ದೆ , ಆತನೇ ಬೆಂಗಳುರಿಗ ಎಂದ .ಹೌದು ಎಂದೇ .....ಮುಂದುವರೆಸಿ ಚಿಕ್ಕಮಗಳುರಿಗೆ ಇಲ್ಲಿಂದ ಎಷ್ಟು ದೂರ ಇರಬಹುದು ಎಂದ ,೧೦೦ ಕಿ ಮಿ ಇದೆ ಅನ್ಸುತ್ತೆ ಅಂದೇ .ಈಗ ನಾನೆ ನೀವು ಯಾವ ಕಡೆ ಅಂದೇ ,ಬೆಂಗಳೂರಿಗೆ ಹೋಗಬೇಕಿತ್ತು ಆದರೆ ಇರುವ ದುಡ್ಡೆಲ್ಲ ಕಳೆದುಕೊಂಡೆ ಅಂದ ,ಚಿಕ್ಕಮಗಳುರಿಗೆ ಹೋಗೋಣವೆಂದರು ದುಡ್ಡಿಲ್ಲ ಅಂದ .ಹೌದ ಎಂದು ಹಳೆ ಹಿಂದಿ ಹಾಡು (ज़िन्दगी के सफ़र में मिल जाते है ..............)ಗುನುಗುತ್ತ ಆತ ಹೇಳಿದಕ್ಕು ನನಗೂ ಸಂಭದವೇ ಇಲ್ಲವೇನೋ ಅನ್ನೋತರ ಕುಳಿತೆ .
ಎದುರಿಗೆ ಹಾಡು ಗುನುಗುತ್ತಿದ್ದರು ಮನಸಲ್ಲಿ ಯೋಚಿಸುತ್ತಿದ್ದೆ ,ನನ್ನ ಬಳಿ ಏನಾದ್ರು ಕೇಳಿದ್ರೆ ........ಕ್ಷಣ ಕಳೆದಿರಲಿಲ್ಲ ಆತ ಕೇಳಿಯೇ ಬಿಟ್ಟ ನಿಮ್ಮಿಂದ ಏನಾದ್ರು ಸಹಾಯ ಆಗುತ್ತ ?ಅಬ್ಬ ........ಒಮ್ಮೆ ನಕ್ಕು ಸುಮ್ಮನಾದೆ .ಮಧ್ಯಾನ್ದಿಂದ ಕೇಳ್ತಾ ಇದೀನಿ ಯಾರು "ನಮ್ಬ್ತಾನೆ " ಇಲ್ಲ .ಅವನ ದ್ವನಿ ಸಣ್ಣದಾಗಿತ್ತು ,ಕಣ್ಣಲ್ಲಿ ಗಂಗೆಯೇ ಹೊರಟಿದ್ದಳು .
ಕಾಸಿಗಿಂತ ನನಗೆ ಹೆಚ್ಚು ಕಾಡಿದ ಪದ "ನಂಬಿಕೆ ".......ಅ ಕ್ಷಣದಲ್ಲಿ ನನ್ ಅವನನ್ನ ನಂಬಿದ್ದೆ ! (ನಮ್ ಅಮ್ಮ ಬೈತಿರುತ್ತಾರೆ ನಿಂದು ಹೆಂಗರುಳು ಯಾರದ್ರು ಅಯ್ಯೋ ಅಂದ್ರೆ ಕೊಟ್ಬಿತೀಯ ,ಯಲ್ಲರೂ ನಿನ್ ತರ ಇರೋಲ್ಲ ನಾಳೆ ಯಾರು ಬೋರೋಲ್ಲ ತಿಳ್ಕೋ ).
ಕಿಸೆಗೆ ಕೈ ಹಾಕಿ ಅದರಲಿದ್ದ ೬೦ ರೂಪಾಯಿಗಳನ್ನೂ ಅವನಿಗೆ ನೀಡಿದೆ (೫೦ ರ ಒಂದು ನೋಟು + ೧೦ ರದ್ದು ಒಂದು ) ಆತ ಮರುದಿನ ಬೆಳಿಗ್ಗೆಯೇ ಅದನ್ನು ಹಿಂತಿರುಗಿಸುವುದಾಗಿ ಹೇಳಿ ನನ್ನ ಫೋನ್ ನಂಬರ್ ತೆಗೆದುಕೊಂಡದ್ದು ಅಲ್ಲದೆ ,ಆತನದ್ದು ನೀಡಿದ (ಅತನದ್ದೆ ಎನ್ನುವುದಕ್ಕೆ ಕಾತರಿ ನನ್ನೆದುರಲ್ಲೇ ಮಿಸ್ ಕಾಲ್ ಮಾಡಿದ್ದ ).ಅಸ್ಟರಲ್ಲಿ ಯಾವೋದು ಒಂದು ಬಸ್ ಬಂತು ತುಂಬಾ ದನ್ಯವಾದಗಳನ್ನು ತಿಳಿಸಿ ಅದನ್ನು ಹತ್ತಿದ .ಇತ್ತ ನಾನು ಬರಬೇಕಿದ್ದ ಬಸ್ ಕೂಡ ಹೊರಡುವ ಸೂಚನೆ ತೋರ್ಸ್ಥಇತ್ತು ..
ಬಸ್ ನಲ್ಲಿ ಕೂತನಂತರ ಯೋಚಿಸತೊಡಗಿದೆ ,"ನಂಬಿಕೆ" ಎಂಬುದು ಎಲ್ಲ ಸಂಭಂದಗಳ ತಳಹದಿಯಲ್ಲವೇ ?
ಅದು ಪ್ರೀತಿಯೇ ಆಗಿರಲಿ ,ಸ್ನೇಹವೇ ಆಗಿರಲಿ ಅಥವಾ ನೆಂಟಸ್ತನ .

ದಿನ ಕಳೆಯಿತು ,ವಾರವೂ ಆಯಿತು .ಅ ಕಡೆ ಇಂದ ಯಾವುದೇ ಕರೆ ಇಲ್ಲ .ದುಡ್ಡು ದೊಡ್ಡ ವಿಷೆಯವಲ್ಲ ನಾನಿಟ್ಟನಂಬಿಕೆ ಹುಸಿಯಯಿತಲ್ಲ ಅನ್ನೋ ಬೇಸರ .ಕೆಲವೊಮ್ಮೆ ಅನ್ನಿಸಿದ್ದುಂಟು ನಾನೆ ಕರೆ ಮಾಡಿ ಹಿಗ್ಗಾ ಮುಗ್ಗ ಬಾಯಿಗೆ ಬಂದಂತೆ ಬೈಯೋಣ ಅಂತ ,ಅದರೂಯಾಕೋ ಮನಸ್ಸು ಒಪ್ಪುತ್ತಿಲ್ಲ .
ಇದೆಲ್ಲ ನಡೆದ ಮೇಲೆ ಅನ್ನಿಸಿದೆ :
ವ್ಯಕ್ತಿಯನ್ನು ನಂಬಲು ಆತನ ಪರಿಚಯ ಅಗತ್ಯವೇ ?
ನಂಬಿಕೆಯೇ ಇಲ್ಲದ ಪ್ರೀತಿ ಪ್ರೀತಿಯೇ ?

ಅದರೂ ಕೆಲವೊಮ್ಮೆ ಈ ಹಾಡು ನೆನಪಾಗುತ್ತೆ "ನಂಬಿ ಕೆಟ್ಟವರಿಲ್ಲವೋ ,ನಂಬಿ ಕೆಟ್ಟವರಿಲ್ಲವೋ.

ಕಾಮೆಂಟ್‌ಗಳು

  1. ಅದಿಕ್ಕೇ ಹೇಳೋದು ಹಾಡು ಗುನುಗ್ತಾ, ಗೊತ್ತಿಲ್ದೇ ಇರೋರಿಗೆಲ್ಲಾ ಸಹಾಯ ಮಾಡಬಾರದು ಅಂತ... ಬರಹ ಚೆನ್ನಾಗಿದೆ...

    ಪ್ರತ್ಯುತ್ತರಅಳಿಸಿ
  2. ಅವಸರ ಅಷ್ಟೊಂದು ನನಗೆ.. ಅದಿಕ್ಕೇ ಈ ಎರಡನೇ ಕಾಮೆಂಟ್.. ನಂಬಿ ಕೆಟ್ಯಲ್ಲೋ ತಮ್ಮಾ........

    ಪ್ರತ್ಯುತ್ತರಅಳಿಸಿ
  3. ಕೆಡ್ಲಿಲ್ಲ ಬಿಡಿ ಅಕ್ಕ , ನಾನು ಮಾಡಿದ್ದೂ ಒಳ್ಳೆಯ ಕೆಲಸ ಅಂತ ಸುಮ್ಮನಾಗಿ ಬಿಡುತ್ತೇನೆ. ಗಾದೆಯೇ ಇದೆಯಲ್ಲ ನಿನ್ನ ಕರ್ಮ ನೀನು ಮಾಡು ಫಲ ನಿಡುವುದು ಬಿಡುವುದು ಅವನಿಗೆ ಬಿಟ್ಟ ವಿಷಯ :)

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು