ಬದುಕು ,ಭಾವ ಮತ್ತು ನಾನು

ಪಟ್ ಪಿಟ್ ಟುಳುಮ್......................ಸದ್ದು ಮಾಡುತ್ತ ಆಗ ತಾನೇ ನಿಂತ ಮಳೆಯ ಹನಿಗಳು ಸೂರಿನಿಂದ ಕೆಳಗೆ ಅಂಗಳದಲ್ಲಿ ನಿಂತ ನೀರಿನ ಮೇಲೆ ಬೀಳುತ್ತಿತ್ತು .ಡುಂ ಡುಡುಂ ಎಂದು ಸದ್ದು ಮಾಡುತ್ತಿದ್ದ ಗುಡುಗು ,ಅದಕ್ಕೆ ತಾಳ ಬದ್ದವಾಗಿ ಬಂದು ಹೋಗುತಿದ್ದ ಮಿಂಚು ತಮ್ಮ ಆಟ ಇನ್ನು ಮುಗಿದಿಲ್ಲ ಎಂಬ ಸೂಚನೆ ಆಗಲೇ ಕೊಡುತ್ತಿದ್ದವು .
ಜಗಲಿಯ ಮೇಲೆ ಕೂತು ಅಮ್ಮ ಸುಟ್ಟು ಕೊಟ್ಟ ಹಲಸಿನ ಹಪ್ಪಳ ಒಂದು ಕೈ ಅಲ್ಲಿ ,ಬಿಸಿ ಬಿಸಿ ಹೊಗೆ ಆಡುತ್ತಿರುವ ಕಾಫಿ ಇನ್ನೊಂದು ಕೈಲಿ , ತಿನ್ನುತ್ತಾ ಆ ಮಳೆಯ ಮುಂದಿನ ಆಟದ ನಿರೀಕ್ಷೆಯಲ್ಲಿ ಕುಳಿತಿರುವವನಂತೆ ಆಗಸದಲ್ಲೇ ನೋಡುತ್ತಾ ಕುಳಿತಿದ್ದೆ .
ಡಂ ಡಮಾರ್ ಎಂಬ ಭಯಂಕರ ಗುಡುಗಿನ ಸದ್ದು ಒಮ್ಮೆ ಮೈ ನಡುಕಿಸಿತ್ತಾದರು , ಮಾಮೂಲ್ ಅದ್ದರಿಂದ ಅಸ್ಟೇನು ಭಯವಾಗಲಿಲ್ಲ .ಸುಮ್ಮನೆ ಕುಳಿತಿದ್ದೇನಲ್ಲ ಹೊಟ್ಟೆ ಉರಿ ಈ ಯೋಚನೆ ಗಳಿಗೆ ತಕ್ಷಣ ಆವರಿಸಿಕೊಂಡು ಬಿಡುತ್ತವೆ . ಮಳೆ ನಿಂತಾಗ ಕೂಗುವ ಕೆಲವು ಹುಳ ಹಪ್ಪಟೆ ಗಳು ಟ್ರೂ ಟ್ರೂ ಪ್ರೂ ಕ್ರೂ .........ಹೀಗೆ ಕಾಗುಣಿತವೆ ಗೊತ್ತಿಲ್ಲದಂತೆ ಕಿರುಚಾಡುತ್ತಿದ್ದವು.ಇವೆಲ್ಲವೂ ಒಮ್ಮೆ ಒಟ್ಟಾಗಿ ನನ್ನನ್ನು ನಿದಾನವಾಗಿ ಗತದೆಡೆಗೆ ಕೊಂಡೈಯಲು ತಯಾರಾದಂತೆ ಭಾಸವಾಗುತಿತ್ತು . ನಾನೋ ಮೊದಲೇ ಭಾವುಕ ,ಅಂದ ಮೇಲೆ ಕೇಳಬೇಕೆ?
ಹೊರಳಿತು ನನ್ನಾ ಯೋಚನೆ ಬಾಲ್ಯದೆಡೆಗೆ , ಹೇಗಿತ್ತು ನಾ ಕಂಡ ಆ ನನ್ನ ಬಾಲ್ಯದ ದಿನಗಳು ಈಗ ಹೇಗಾಗಿದೆ .
೩ ಕಾಲಗಳಿಗೆ ತಕ್ಕಂತೆ ನನ್ನಾ ಬದುಕು ಕೂಡ ಬದಲಾಗುತ್ತಾ ಸಾಗುತಿತ್ತು .ಅಬ್ಬಾ ಅದೆಷ್ಟು ಆಟ ,ಮೋಜು ಮಸ್ತಿ ಮಾಡಿದ್ದೆನಾಗ . ಹೇಳತೀರದು ನನ್ನಾ ಸಂಭ್ರಮವನ್ನ . ಬದುಕು ಎಂದು ವೇಳಾಪಟ್ಟಿಯಾಗಿರಲಿಲ್ಲ .ಸ್ವಚ್ಚಂದವಾದ ಆಗಸದಲ್ಲಿ ಇರುವ ಹಕ್ಕಿಯಂತೆ ಎಲ್ಲಿ ಬೇಕಾದರು ಹಾರಾಡು , ಗೂಡು ಸೇರುವುದು ಮರೆಯದಿದ್ದರೆ ಸೈ.
ನನಗಿನ್ನೂ ನೆನಪಿದೆ ಆ ಬಾಲ್ಯದ ತುಂಟಾಟಗಳು , ಪಕ್ಕದಲ್ಲಿರುವವನ ಬಳಪ ಕದಿಯುವುದು ,ಅವನತ್ತಾಗ ಹಿರಿ ಹಿಗ್ಗುವುದು .ಸ್ವಲ್ಪ ತರಗತಿಯಲ್ಲಿ ಯಲ್ಲರಿಗಿಂತ ಚುರುಕಾಗಿದ್ದರಿಂದ ನಾನೆ ಕ್ಲಾಸ್ ಲೀಡರ್ ಆಗಿದ್ದೆ ,ಅಬ್ಬಾ ಎಷ್ಟು ಪಕ್ಷಪಾತಿ ಆಗಿದ್ದೆ ನಾನಾಗ , ನನಗೆ ಯಾರು ಆಗುವುದಿಲ್ಲವೋ ಅವರ ಹೆಸರೇ ಹಲಗೆಯ ಮೇಲೆ ಬರೆಯುತ್ತಿದ್ದೆ (ಅದು ಜಾಸ್ತಿ ಇಂಟು ಹಾಕಿ )ನೆನೆಸಿ ಕೊಂಡರೆ ನಗು ಬರುತ್ತದೊಮ್ಮೆ .
ಸಂಜೆ ಯಾದರೆ ಸಾಕು ಅಕ್ಕ ಅಣ್ಣನ ಜೊತೆ ಕೂತು ಬಾಯಿ ಪಾಠ ಮಾಡಲೇ ಬೇಕು ,ಮಗ್ಗಿ ,ನಕ್ಷತ್ರಗಳ ಹೆಸರು ,ಕಾಗುಣಿತ ,ವಾರಗಳು ,ತಿಥಿ .ಹೀಗೆ ಇನ್ನು ಏನೇನೋ .......ನಾನೋ ತುಂಟ .ಅದು ಅಲ್ಲದೆ ಚಿಕ್ಕವನಾದ್ದರಿಂದ ಸ್ವಲ್ಪ ಸಲುಗೆ ಬೇರೆ . ಆದರೂ ನಮ್ಮ ಅಪ್ಪನ ಒಂದು ಕಣ್ಣು ಸದಾ ನನ್ನಾ ಮೇಲೆಯೇ .
ಅಂದಿನ ಆಟಗಳು ಒಂದೇ ಎರಡೇ , ಕುಂಟಾ ಪಿಲ್ಲಿ ,ಚಿನ್ನಿ ದಾಂಡು,ಲಗೋರಿ , ಹಿಡಿಯೋ ಆಟ , ಚಪ್ಪೆ ಆಟ , ಕಟ್ಟೆ ಆಟ , ಕಬ್ಬಡಿ , ಕಂಬದ ಆಟ , ಮರ ಕೋತಿ .ಹೀಗೆ ಹತ್ತು ಹಲವು ...ಜೊತೆಗೆ ಕ್ರಿಕೆಟ್ ವೀಕ್ಷಣೆ (ಆಡಲು ಸೇರಿಸಿಕೊಳ್ಳುತ್ತಿರಲಿಲ್ಲ ,ಚಿಕ್ಕವ ಎಂಬ ಕಾರಣಕ್ಕೆ ).
ಮಳೆಗಾಳದಲ್ಲೋ ಸ್ಕೂಲಿಗೆ ಚಕ್ಕರ್ ಹೊಕೊದೆ ಮಜಾ ಕೊಡೊ ಸಂಗತಿ ,ಕಾಲು ನೋವು ,ತಲೆ ನೋವು ,ಜ್ವರ ಹೀಗೆ ದಿನಕ್ಕೊಂದು ಸುಳ್ಳು ,ಇನ್ನು ಮಜಾವಾದ ವಿಷಯ ಅಂದ್ರೆ ನಮ್ಮ ಮನೆ ಇಂದ ಸ್ಕೂಲಿಗೆ ಹೋಗೋ ದಾರಿಲಿ ಒಂದು ಕಾಲುವೆ ಇದೆ ,ಮಳೆ ಬಂತೆದರೆ ಸಾಕು ,ಮಾಸ್ತರ ಮುಂದೆ ಹಾಜರ್ ,ಸರ್ ಹಳ್ಳ ಬರುತ್ತೆ ರಜ ಕೊಡಿ .ಈಗ ಕೆಲವೊಮ್ಮೆ ಬಸ್ ಇಳಿದು ಮನೆಗೆ ಹೋಗುವಾಗ ಅನ್ನಿಸುತ್ತೆ ಎಷ್ಟು ಚೆಂದ ಆ ಬಾಲ್ಯ .

ಒಮ್ಮೊಮ್ಮೆ ಅನ್ನಿಸುತ್ತೆ ನಾನ್ಯಾಕೆ ಇಲ್ಲ ಆಗಿನ ಹಾಗೆ, ಮಳೆಗಾಲದಲ್ಲಿ ಆನೇಕಲ್ಲು ಬಿದ್ದ ತಕ್ಷಣ ಹೆಕ್ಕಲು ಓಡಿ ಹೋಗುತಿದ್ದ ಆ ಕಾಲುಗಳಿಗೆ ಇಂದೇಕೆ ಮುಜುಗರ ಯಾರದ್ರು ನೋಡಿಯರೆಂಬ , ಕಲ್ಲು ಕಂಡ ತಕ್ಷಣ ಎತ್ತಿ ಯಾವೋದು ಮರದತ್ತ ಎಸಯುತಿದ್ದ ಕೈಗಳೇಕೆ ಸುಮ್ಮನಾಗಿವೆ ?
ವ್ಯಕ್ತಿ ಬೆಳೆದ ತಕ್ಷಣ ,ಬಾಲ್ಯವನ್ನು ಮರೆತು ಬಿಡಬೇಕು ಎಂಬ ಕಾನೂನು ಏನಾದರು ಇದೆಯೇ ?
ಇಲ್ಲವೆಂದರೆ , ಮತ್ಯಾಕೆ ನಾವು ಬಾಲ್ಯವನ್ನು ಪನರ್ವರ್ತಿಸಲು ಹಿಂಜರಿಯುತ್ತೇವೆ?

ಇದೆಲ್ಲವನ್ನು ಗಮನಿಸಿದಾಗ ಅರಿಯುತ್ತೇವೆ ................ಬದಲಾಗಿದೆ .
ಅದು ಬಾವವೋ ,ನಾನೋ ಅಥವಾ ಬದುಕೋ ? ತಿಳಿಯದಾಗಿದೆ ?

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು