ಬದುಕು , ಭಾವ ಮತ್ತು ನಾನು - ೩

"ಸಂಪ್ರತಿ ವಾರ್ತಃ ಶುಯನ್ತಃ , ಪ್ರವಚಕಃ ಬಲದೇವಾನಂದ ಸಾಗರಃ" , ರೇಡಿಯೋದಲ್ಲಿ ಬರುತಿದ್ದ ಸಂಸ್ಕೃತ ವಾರ್ತೆಯ ಮೊದಲ ಸಾಲು ಕಿವಿಗೆ ಬೀಳುತಿದ್ದಂತೆ ,ನನಗೆ ಸಮಯದ ಅರಿವು ಮೂಡಿಸಿ ಎದ್ದೇಳಲು ಪ್ರೇರಿಪುಸುತಿತ್ತು.ಹೊರಗಡೆ ಜಡಿ ಮಳೆ ಜಿನುಗುತ್ತಿತ್ತು .ಅದಾಗಲೇ ಸಮಯ ೭.೦೦ ಘಂಟೆ ಆಗಿತ್ತು , ಕ್ಷೌರ ಮಾಡಿಸಲು ಬೇರೆ ಹೋಗಬೇಕಾದ್ದರಿಂದ ಲಗುಬಗನೆ ಎದ್ದು ಬಚ್ಚಲು ಮನೆ ಕಡೆ ಹೋಗಿ ಮುಕ ತೊಳೆದುಕೊಂಡು ಬಂದು ಒಂದು ಭರ್ಜರಿ ಲೋಟ ಕಾಫಿ ಹಿರಿ ಹೊರಡಲನುವಾದೆ .
ಹಿಂದಿನ ದಿನ ಯೋಚಿಸಿದಂತೆ ನಡಿಗೆ ಪ್ರಾರಂಭವಾಯ್ತು .ತೋಟ ದಾಟಿ ಗುಡ್ಡಕ್ಕೆ ಬಂದೋನೆ ಮೊದಲು ಕಾಲು ನೋಡಿ ಕೊಂಡೆ , ಅಗೋ ನೋಡಿ ನನ್ನ ಊಹೆ ಸರಿಯಾಗೇ ಇತ್ತು .ದೊಡ್ಡ ೨ ಇಂಬಳಗಳು ನನ್ನ ಬಿಸಿ ರಕ್ತ ಕುಡಿಯಲು ಯಲ್ಲಾ ತಯಾರಿ ನಡೆಸಿದ್ದವು ,ರಬ್ಬರ್ನಂಥ ಅವನ್ನು ಕಿತ್ತೊಸೆದು ಮುಂದೆ ಸಾಗ ತೊಡಗಿದೆ .ಜೇಬಿನಲ್ಲಿದ್ದ ಹೆಡ್ ಫೋನ್ ತೆಗೆದು ನನ್ನ ಮೊಬೈಲ್ ಗೆ ಚುಚ್ಚಿ ತೆಳು ಸಂಗೀತ ಹಾಕಿಕೊಂಡೆ (ಭಾವುಕನಿಗೆ ಇಷ್ಟು ಸಾಕು ).
ಅಂದು ಕ್ಲಾಸ್ ಲೀಡರ್ ಆರಿಸುವ ದಿನ , ೭ ನೇ ತರಗತಿಯವರೆಗೂ ನಾನೆ ಕ್ಲಾಸ್ ಲೀಡರ್ ಆಗಿದ್ದರಿಂದ ಸಹಜವಾಗಿ ಅದೇ ಹುರುಪಿನಲ್ಲಿ ನಾನು ಸ್ಪರ್ಧಿಸಿದೆ . ಮತದಾನದ ಮೂಲಕ ಆಯ್ಕೆ .ನಾವು ಒಟ್ಟು 4 ಮಂದಿ ಇದ್ದೆವು ಸ್ಪರ್ಧಾಕಣದಲ್ಲಿ ,೮೦ ಜನ ವಿದ್ಯಾರ್ಥಿಗಳ ಓಟಿನ ಮೇಲೆ ಲೀಡರ್ ನ ಆಯ್ಕೆ .ನಿಜ ಹೇಳಬೇಕಂದ್ರೆ ನನಗೆ ಅಲ್ಲಿ ಪರಿಚಯವಿದ್ದವರು ೫ ಮಂದಿ ಮಾತ್ರ .
ಶುರುವಾಯಿತು ಲೆಕ್ಕಾಚಾರ , ಹು ಹೂ ೫೦ ಅದರೂ ಒಂದೇ ಒಂದು ಓಟು ಬಿದ್ದಿರಲಿಲ್ಲ .ಕೊನೆ ಅಲ್ಲಿ ೧ ಓಟು ಬಿದ್ದಿತ್ತು ,ಅದು ನನ್ನದೇ .ನಿಜವಾಗಿ ಎಲ್ಲರ ಮುಂದೆ ಜೋರಾಗಿ ಅತ್ತು ಬಿಟ್ಟಿದ್ದೆ .ಅವಮಾನವಾಗಿತ್ತು ನಿಜ , ತೀರಿಸಿಕೊಳ್ಳುವ ಬಗೆ ಒಂದೇ ಒಂದು ,ಆದುವೇ ಎಲ್ಲರಿಗಿಂತ ಚೆನ್ನಾಗಿ ಓದಬೇಕಿತ್ತು .(ಇನ್ನೊಂದು ರಹಸ್ಯ ಇದೆ ,ನಿಮಗೆ ಮಾತ್ರ ಹೇಳ್ತಿನಿ .ಹುಡುಗಿಯರ ಸ್ನೇಹ ಸಂಪಾದಿಸಿಕೊಳ್ಳಬೇಕಿತ್ತು ನಾನು ಮಾಡಿದ್ದೂ ಅದೇ ).
ನಂತರ ಸತತ ೨ ವರ್ಷ ನಾನೇ ಕ್ಲಾಸ್ ಲೀಡರ್ . ಕಾರಣ ನನ್ನ ೨ ನೇ ತಂತ್ರ (ಉಪಯೋಗಿಸಲು ಕಾರಣವಿಷ್ಟೇ ,ನಾವಿದದ್ದು ೧೪ ಮಂದಿ ಹುಡುಗರು ,೩೫ ಮಂದಿ ಹುಡುಗಿಯರು ).ಇನ್ನೊಂದು ಮಜವಾದ ವಿಷಯ ನಾನು ಹಿಂದಿ ಕಲಿತದ್ದು .
೫ ನೇ ತರಗತಿಯಿಂದಲೂ ಹಿಂದಿ ಇದ್ದರು ಕೂಡ ಶಿಕ್ಷಕರ ಕೊರತೆಯಿಂದ ಪರೀಕ್ಷೆ ಇರಲಿಲ್ಲ .ಆದರೆ ೭ ನೇ ತರಗತಿಯಲ್ಲಿ ಪಬ್ಲಿಕ್ ಪರೀಕ್ಷೆ ಅದ್ದರಿಂದ ಕಡ್ಡಾಯವಾಗಿ ಬರೆಯಲೆಬೇಕಿತ್ತು , ನಮಗೋ ಒಂದು ಅಕ್ಷರ ಕೂಡ ಬರಿಯೋಕೆ ಬರುತ್ತಿದ್ದಿಲ್ಲ ಇನ್ನು ಹೇಗೆ ಉತ್ತರ ಬರೆದೆವು . ಅದಕ್ಕೆ ಅಲ್ಲಿದ್ದ ಶಿಕ್ಷಕರು ನೀಡಿದ ಸಲಹೆ ಅಂದ್ರೆ , ಇರುವ ಪ್ರಶ್ನೆಗಳನ್ನೇ ತಿರುಗಿಸಿ ಬರೆಯಿರಿ ಎಂದು .
ನಾನು ಕಷ್ಟ ಪಟ್ಟು ಬರೆದುದಕ್ಕೆ ಬಂದದ್ದು ೫೫ (೧೦೦ ಕ್ಕೆ ೧೦೦ ತೆಗೆದಷ್ಟೇ ಸಂತೋಷ ಆಗಿತ್ತು , ಹಾಗೆಯೇ ಹಿಂದಿ ಕಲಿತೆನೆಂಬ ಭ್ರಮೆ ಕೂಡ ಮೂಡಿತ್ತು ).ಕ್ಲಾಸ್ ಲೀಡರ್ ನಾನೆ ಆದರೂ ಕೂಡ ಎಲ್ಲರಿಗಿಂತ ಹೆಚ್ಚಾಗಿ ಗಲಾಟೆ ಮಾಡುತಿದದ್ದು ನಾನೇ . ಇದಕ್ಕೆ ಸರಿಯಾಗಿ ನಮ್ಮ ಹಿಂದಿ ಸರ್ ಸ್ವಲ್ಪ ನಂಗೆ ಸಪೋರ್ಟ್ .ಎಲ್ಲ ಸರಿಯಾಗಿ ನಡಯೂತ್ತಿರುವಾಗಲೇ ನಡೆದದ್ದು ಆ ಅಪಘಾತ ,
ಕುಪ್ಪಳ್ಳಿ ಟೂರ್ . ಜೀವನದಲ್ಲಿ ಮರೆಯಲಾಗದ ಘಟನೆಗಳಲೋಂದಾಗಿ ಬಿಡ್ತು .
.............................ಮುಂದುವರಿಯುತ್ತದೆ

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು