ನೀವು ಕೇಳಿದಿರಿ ೧.೨

*ಮಗನ ಕಳ್ಳ ಭೇಟಿಗೆ ಅಪ್ಪನ ಸಮರ್ಥನೆ .

-ಎಷ್ಟಾದರೂ ಅವರೇ ಹಾಗಿದ ಆಲದಮರ ಅಲ್ವೇ
(ಓತಿಕೆತಕ್ಕೆ ಬೇಲಿಗೂಟ ಸಾಕ್ಷಿ ಎಂದ್ರಂತೆ ಯಡ್ಡಿ ). Laughing out loud
+++++++

*ಪಾಸ್ವಾನ್ ಮನೆಯಲ್ಲಿ ಬೆಂಕಿ, 'ಡ್ರಾ'ಯಿಂಗ್ ರೂಂ ಭಸ್ಮ ವಂತೆ !

-ಇದಕ್ಕೆಲ್ಲ ಅವರ 'ವೈ'ರಿಂಗಿನ ಶಾರ್ಟ್ ಸರ್ಕೀಟ್ ಕಾರಣವಂತೆ .
+++++++++

*ಕಸಬ್ ಗೆ ಓದಲು ದಿನ ಪತ್ರಿಕೆ ಬದಲು ಕಥೆ ಪುಸ್ತಕವಂತೆ !

-ಅವನ ಕಥೆಯೇ ನಮಗೆ ಸಹಿಸಲಾರದ ವ್ಯಥೆ , ಮಧ್ಯೆ ಇನ್ನೊಂದು ಕಥೆ .
+++++++++

*ಕನ್ನಡದಲ್ಲಿ ಅತಿ ಹೆಚ್ಚು ಕಥೆ ಬರೆದವರಿಗೆ ಸನ್ಮಾನ ಮಾಡುವುದಾಗಿ ಘೋಷಿಸಿದ್ದಾರಂತೆ ವಾಟಾಳ್ !

-ಎಲ್ಲರದ್ದು ವರುಷಕ್ಕೊಂದು ಕಥೆಯಾದರೆ ನನ್ನದು ದಿನಕ್ಕೊಂದು ಕಥೆ ಹಾಗಾಗಿ ಆ ಸನ್ಮಾನ ನನಗೆ ಮಾಡಿ ಅಂದಿದ್ದಾರಂತೆ 'ಗೌಡ್ರು '.
++++++++

*ಕಮಿಷನ್ ಜಗಳ ಇಬ್ಬರ ಕೊಲೆ .

-ವಿಚಾರಣೆಗೆ ಜಂಟಿ ಕಮಿಷನ್ ನೇಮಕ .
+++++++++

*ಈ ಬಾರಿಯದು ತ್ರಿಶಂಕು ಸರ್ಕಾರವಂತೆ ?

-ಅಯ್ಯೋ ಅಷ್ಟು ಬೇಗ ನಮ್ಮ ಹೆಸರೆಲ್ಲ ಯಾಕೆ ಹೇಳಿದಿರಿ ಅನ್ನುತ್ತಿದ್ದಾರಂತೆ ಲಾಲು ,ಕಾರಟ್ ,ಪಾಸ್ವಾನ್ ,ಮಾಯಾ ,ಜಯ ..............! Laughing out loud
+++++++++++

*ಜಾತ್ಯಾತೀತರೆಲ್ಲ ಒಂದಾಗಿ 'ಕೈ ' ಬೀಸೋಣ ಅಂದ್ರಂತೆ ಪವಾರ್ !

-ಆವಾಗಲೇ 'ಆನೆ'ಬಲ ಬರೋದು ಅಂದ್ರಂತೆ ಮಾಯಾ .
+++++++++

*ಅಧಿಕಾರದ ಉರುಳುವ ಹೆದರಿಕೆಯಿಂದ ಹೋಮ ಹವನಕ್ಕೆ ಮೊರೆಹೋದ ಯಡ್ಡಿ .

-ಪಕ್ಕದಲ್ಲಿದ್ದ S'ಅಕ್ಕನನ್ನು ನೋಡಿ ದಂಪತಿಗಳಿಬ್ಬರು ಕುಳಿತುಕೊಳ್ಳಿ ಎಂದರಂತೆ ಪುರೋಹಿತರು .ಹಿ ಹೀ Laughing out loud :D
+++++++++++

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು