ಕುಪ್ಪಳ್ಳಿ ಸುತ್ತ - ಮುತ್ತ

ತುಂಬಾ ಜನ ಕುಪ್ಪಳ್ಳಿ ನೋಡಿಲಿಕ್ಕೊಸ್ಕರ ತುಂಬಾ ಕಡೆ ಇಂದ ಬರುತ್ತೀರಿ, ಕೇವಲ ಅದೊಂದೇ ನೋಡಿ ಮರಳುವ ಬದಲು ಅಲ್ಲೇ ಸುತ್ತ ಮುತ್ತ ಇರುವ ಕೆಲವು ಪ್ರದೇಶಗಳನ್ನು ಪರಿಚಯಿಸಲು ಈ ಲೇಕನ .
೧) ಅಷ್ಟು ದೂರ ಬದಿರುತ್ತಿರ ಅಂದ ಮೇಲೆ ಮೊದಲು ನಮ್ಮ ಮನೆಗೆ ಬನ್ನಿ ದಾರಿ ನನ್ನ ಪ್ರೊಫೈಲ್ ಫೋಟೋ ದಲ್ಲಿದೆ Laughing out loud
(ನಾನು ಊರಿನಲ್ಲಿದ್ದರೆ ಖಂಡಿತವಾಗಿ ನಿಮ್ಮ ನೆರವಿಗೆ ಬರುತ್ತೇನೆ ).
೨) ಕುಪ್ಪಳ್ಳಿ - ಇದರ ಬಗ್ಗೆ ನಾನೇನು ಹೆಚ್ಚು ವಿವರಿಸಬೇಕಾಗಿಲ್ಲ ಅನ್ನಿಸುತ್ತೆ .
ಬೆಂಗಳುರಿಂದ ಬರುವವರಾದರೆ ರಾತ್ರಿ ೧೦.೩೦ ಕ್ಕೆ ನೇರವಾದ ರಾಜಹಂಸ ಬಸ್ಸಿದೆ .
ಇನ್ನು ಬೀದರ್ , ಗುಲ್ಬರ್ಗ ಕಡೆ ಇಂದ ಬರುವವರಾದರೆ ಶಿವಮೊಗ್ಗ ಕ್ಕೆ ಮೊದಲು ಬಂದು ಅಲ್ಲಿಂದ ತೀರ್ಥಹಳ್ಳಿ . ಅಲ್ಲಿಂದ ಕೊಪ್ಪ ಬಸ್ ಹತ್ತಿದರೆ ನಿಮಗೆ ಮಾರ್ಗ ಮಧ್ಯದಲ್ಲಿ ಕುಪ್ಪಳ್ಳಿ ಸಿಗುತ್ತದೆ .
ಇನ್ನು ಮಂಗಳೂರು , ಕುಂದಾಪುರ ಆ ಕಡೆ ಇಂದ ಬರುವವರಿಗೆ ತೀರ್ಥಹಳ್ಳಿಗೆ ನೇರವಾಗಿ ಬಸ್ ಸೌಲಭ್ಯವಿದೆ .
ತೀರ್ಥಹಳ್ಳಿ ಯಲ್ಲಿ ಉಳಿದುಕೊಳ್ಳಲು ಎಲ್ಲ ವ್ಯವಸ್ತೆ ಇದೆ .
೩)ಇನ್ನು ಹೇರಾಂಭಾಪುರ , ನಿಮಗೆ ಸ್ವಲ್ಪ ತ್ರಾಸ ಆಗಬಹುದು . ಕಾರಣವಿಷ್ಟೇ ನೇರವಾಗಿ ಇಲ್ಲಿಗೆ ಬಸ್ ಇಲ್ಲ .ನೀವು ನಮ್ಮ ಮನೆ ಕಡೆ ಅಂದರೆ ಕುಪ್ಪಳ್ಳಿ ಮತ್ತು ತೀರ್ಥಹಳ್ಳಿ ಮಧ್ಯೆ ದೇವಂಗಿ ಅಂತ ಒಂದು ಊರು ಸಿಗುತ್ತೆ ಅಲ್ಲಿ ಇಳಿದುಕೊಂಡು ಕಟ್ಟೆಹಕ್ಕಲು ಎಂಬ ಗ್ರಾಮಕ್ಕೆ ಬರಬೇಕು (ಘಂಟೆಗೊಂದು ಬಸ್ ). ಅಲ್ಲಿಂದ ೫ ಕಿ ಮಿ (ಇಷ್ಟವಿದ್ದರೆ ನಡೆಯಬಹುದು , ಇಲ್ಲದಿದ್ದರೆ ಆಟೋನೆ ಗತಿ ).
ಇಲ್ಲಿಯ ವಿಶೇಷ ಅಂದ್ರೆ ಇಲ್ಲಿರುವ ಅಮ್ಮನವರು (ಜಲದುರ್ಗಂಬ ) ತೋಟದ ಸಮೀಪವಿದ್ದು (ಉದ್ಭವ ಮೂರ್ತಿ )ಇಲ್ಲಿ ಸದಾ
ಕಾಲ ಗರ್ಭಗುಡಿ ಯಲ್ಲಿ ನೀರು ಇದ್ದೆ ಇರುತ್ತದೆ (ಜಲ ಬರುತ್ತದೆ ).
೩)ಕಟ್ಟೆಹಕ್ಕಲು ಅಲ್ಲಿಂದ ಮುಂದೆ ಹೋದರೆ ನಿಮಗೆ ಸಿಗುವುದೇ ಮೃಗವಧೆ .
ಹೆಸರೇ ಹೇಳುವಂತೆ ಇಲ್ಲಿ ಮೃಗ ವಧೆ ಆಗಿದೆ .ಅದಕ್ಕೊಂದು ಕಥೆ "ರಾಮಾಯಣದಲ್ಲಿ ಸೀತೆಯು ಬೇಕೆನುವ ಮಾಯಾ ಜಿಂಕೆ ಯನ್ನು ಶ್ರೀ ರಾಮ ಬೆನ್ನಟ್ಟಿಕೊಂಡು ಹೋಗಿ ಕೊಂಡಿದ್ದು ಇಲ್ಲೇ ಅನ್ನುತ್ತದೆ ಪುರಾಣ ".
೪)ಈಗ ಮತ್ತೆ ವಾಪಸ್ ತೀರ್ಥಹಳ್ಳಿಗೆ (ನಮ್ಮೂರಿಂದ ತೀರ್ಥಹಳ್ಳಿಗೆ ಹೋಗಲು ೨ ಮಾರ್ಗಗಳಿವೆ , ಈಗ ನಾವು ಹೊರಟಿರುವುದು ೨ ನೆ ಮಾರ್ಗ ದಲ್ಲಿ ).ದಾರಿಯಲ್ಲಿ ನಿಮಗೆ ತುಂಗಾ ನದಿಯ ದರ್ಶನವಾಗುತ್ತದೆ , ಅದರ ದಡದಲ್ಲಿ ಇರುವುದೇ ಚಿಬ್ಬಲಗುಡ್ಡೆ .
ಇಲ್ಲಿ ಗಣಪತಿ ದೇವಸ್ಥಾನವಿದೆ .ಇಲ್ಲಿ ಕೂಡ ಶೃಂಗೇರಿಯಲ್ಲಿರುವಂತೆ . ಇಲ್ಲಿರುವ ಮೀನುಗಳಿಗೆ ಅಕ್ಕಿ ಹಾಕಿದರೆ ಮೈ ಮೇಲೆ ಏಳುವ ಚಿಬ್ಬು ಹೋಗುತ್ತದೆ ಎಂಬ ನಂಬಿಕೆ ಇದೆ . ಇನ್ನೊಂದು ಅಂದ್ರೆ ಇಲ್ಲಿರುವ ಒಂದು ದೊಡ್ಡ ಮೀನಿಗೆ ಮೂಗುತಿ ಸುರಿದಿದ್ದಾರೆ ಎಂದು ಕೂಡ ಹೇಳುತ್ತಾರೆ .
೫)ಮುಂದೆ ಹೋದರೆ ಸಿಗುವುದೇ ಮೇಳಿಗೆ - ಇಲ್ಲಿ ನಿಮಗೆ ಪುರಾತನವಾದ ಒಂದು ಜೈನರ ದೇವಾಲಯ ಸಿಗುತ್ತದೆ .
೬) ಕೊನೆಯಲ್ಲಿ ತೀರ್ಥಹಳ್ಳಿ - ಇಲ್ಲಿ ನಿಮಗೆ ಗೊತ್ತಿರುವಂತೆ ಪುರಾತನ ಸೇತುವೆ , ರಾಮ ದೇವಾಲಯ .
ವಿಶೇಷವೆಂದರೆ ರಾವಣನು ಶಿವನ ಆತ್ಮ ಲಿಂಗ ತರುವಾಗ ಗಣಪತಿ ಕೈ ಅಲ್ಲಿ ಸಿಕ್ಕಿ ಅದು ನೆಲಕ್ಕೆ ಅಂಟಿಕೊಂಡು , ಅದನ್ನು ಕೀಳುವ ಪ್ರಯತ್ನದಲ್ಲಿ ಅದಕ್ಕೆ ಬಲವಾಗಿ ಹೊಡೆದಾಗ ಅದರ ಒಂದು ಚೂರು ಇಲ್ಲಿ ಬಂದು ಬಿತ್ತೆಂದು ಹೇಳುತ್ತಾರೆ .
ಹಾಗೆಯೇ ಪರಶುರಾಮ ತನ್ನ ತಾಯಿಯ ಶಿರ ತುಂಡರಿಸಿದ ಕೊಡಲಿಯನ್ನು ಯಲ್ಲಿ ತೊಳೆದರು ಅದರಲ್ಲಿನ ರಕ್ತದ ಕಲೆ ಹೋಗದಿದ್ದಾಗ ಇಲ್ಲಿ ಬಂದು ತೊಳೆದನೆಂದು ಅದು ಹೋಯಿತೆಂದು ಪುರಾಣ ಹೇಳುತ್ತದೆ .ಅದಕ್ಕಾಗೆ ಇಲ್ಲಿ ಹೊಳೆ ಮಧ್ಯೆ ರಾಮನ ಕೊಂಡ ಇದೆ . ಪ್ರತಿ ದಶಂಬರ ದಲ್ಲಿ ಇಲ್ಲಿ ಜಾತ್ರೆ ನಡೆಯುತ್ತೆ (ಎಳ್ಳು ಅಮಾವ್ಯಸೆ).ಕೊನೆ ದಿನ ತೆಪ್ಪೋಸ್ಸವ ನಡಿಯುತ್ತೆ 

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು