(ಮರ್ಕಟ )ನನ್ನೀ ಮನಸ್ಸು

ತಣ್ಣನೆಯ ತಿಳಿ ಗಾಳಿ ಬೀಸುತ್ತಿತ್ತು , ಆಗಸದಲ್ಲಿ ಸೂರ್ಯ ನಿಧಾನವಾಗಿ ತನ್ನ ಮನೆಯತ್ತ ಹೆಜ್ಜೆಹಾಕತೊಡಗಿದ್ದ ,ಅವನಿಗೂ ಪಾಪ ಕತ್ತಲಾಗಿರಬೇಕು ಕೆಂಪು ಬಣ್ಣದ ಟಾರ್ಚ್ ಹಿಡಿದಿದ್ದ ಅನ್ನಿಸುತ್ತೆ ಅದಕ್ಕೇನೋ ಹೋಗೋ ದಾರಿಯಲೆಲ್ಲ ಕೆಮ್ಪನ್ನೇ ಚೆಲ್ಲಿದ ಹಾಗಿತ್ತು . ಬದುಕು ಯಾರಿಗಾದರು ಸರಿ , ಅದು ಮಾನವನೇ ಇರಬಹುದು ಅಥವಾ ಪ್ರಾಣಿ ಪಕ್ಷಿಗಳು , ಬದುಕು ಬದುಕೇ ಅಲ್ಲವೇ ? ಇದನ್ನರಿತೋ ಏನೋ ಚಿಲಿ ಪಿಲಿ ಗುಟ್ಟುತ್ತ ತಮ್ಮದೇ ಭಾಷೆಯಲ್ಲಿ ಏನನ್ನೋ ಹೇಳಿಕೊಳ್ಳುತ್ತಾ ತನಗಾಗಿ ಕಾದಿರಬಹುದಾದ ಮನೆಯವರನ್ನು ನೋಡಲು ಸುಂಯ್ ಎಂದು ಅತ್ಯೋಸಹದಲ್ಲಿ ಮನೆ ಕಡೆ ಹೊರಟಿದ್ದವು ಆ ಹಕ್ಕಿಗಳು .ಹಾಗೆ ಅದನ್ನೇ ವೀಕ್ಷಿಸುತ್ತಾ ಕುಳಿತಿದ್ದ ನನಗೆ ಮನಸಿನ ಯಾವುದೊ ಮೂಲೆಯಲ್ಲಿ ಒಂದು ತರ ತಳಮಳ , ಏನೋ ಕಳೆದು ಕೊಂಡಿಹೆನೇನೋ ಅನ್ನೋ ಭಾವ .
ಅವಾಗಲೇ ಅನಿಸಿದ್ದು ಹೊರಗಡೆ ಅದೆಷ್ಟೇ ಕ್ರೂರ ಮನಸಿರಲಿ (ಹಾಗೆಂದು ನನ್ನದು ಕ್ರೂರ ಅಂತ ಅಲ್ಲ ),ಮನುಷ್ಯನ ಒಳ ಮನಸ್ಸು ಎಂಬುದು ಯಾವಾಗಲು ಮೃದುವಾದದ್ದೇ.ಈ ಮನಸ್ಸೇ ಹಾಗೆ ಕಂಡಿದ್ದೆಲ್ಲವನ್ನು ಬೇಕು ಎನ್ನುವ , ಇಷ್ಟವಾಗಿದ್ದನ್ನ ಬೇಗ ಹಚ್ಚಿಕೊಳ್ಳುವ , ದೊರೆಯದಇದ್ದಾಗ ಅಷ್ಟೇ ಬೇಗ ದ್ವೇಷಿಸುವ ಮನುಷ್ಯ ಪ್ರಾಣಿಯ ಒಂದು ದುರ್ಬಲ ಕೊಂಡಿ . ಅದಕ್ಕೆ ಹೇಳಿದ್ದು (ಕವಿಯ ಹೆಸರು ನೆನಪಿಲ್ಲ ಕ್ಷಮಿಸಿ ) ಯಾರೋ "ಹುಚ್ಚು ಕೊಡಿ ಮನಸ್ಸು ಅದು ೧೬ ರ ವಯಸ್ಸು ". ನನ್ನ ಪ್ರಕಾರ ಅದಕ್ಕೇನು ವಯಸ್ಸಿನ ಮಿತಿ ಇಲ್ಲ ಅನಿಸುತ್ತೆ .
ಅದೆಷ್ಟು ಬೇಗ ಹಚ್ಚಿಕೊಂಡು ಬಿಡುತ್ತದೆ ನನ್ನೀ ಮನಸ್ಸು ಅಪರಿಚತರನ್ನು ಮಾತಿಲ್ಲ , ಮುಕ ಪರಿಚಯವಿಲ್ಲ , ಕೇವಲ ಪದಗಳು , ಅದು ಆಗೊಂದು ಈಗೊಂದು ಎನ್ನುವ ಹಾಗೆ .ಅಷ್ಟು ಸಾಕೆ ಈ ಸಂಭಂದಕ್ಕೆ ಬುನಾದಿ . ಒಂದತು ಸತ್ಯ ಮಾತಿನಲ್ಲಿ ಬಣ್ಣಿಸಲಾಗದ ಈ ಮನಸಿನ ಭಾವನೆಗಳನ್ನು ಪದಗಳಿಗಿಂತ ಬೇರೊಂದು ಮಾಧ್ಯಮದಲ್ಲಿ ಅಷ್ಟು ಪರಿಣಾಮಕಾರಿಯಾಗಿ ಬಣ್ಣಿಸಲಾಸಾದ್ಯ .ಒಮೊಮ್ಮೆ ಅನ್ನಿಸುತ್ತೆ ನಾನೇಕೆ ಇಷ್ಟು ಅತಿಯಾದ ಭಾವುಕನಗುತ್ತೇನೆ, ನನ್ನ ಮನಸಿನ ತೋಳಲಾಟಗಳನ್ನೂ ಬೇರೆಯವರ ಪ್ರತಿಕ್ರಿಯೆ ಮೇಲೆ ಯಾಕೆ ನಿರ್ಧರಿಸಲು ಹೊರಡುತ್ತೇನೆ ?
ಇನ್ನೊಂದು ಮಾತು ಮನುಷ್ಯ ಯಾವುದರಲ್ಲಿ ಪ್ರಬಲ ಅಂದುಕೊಳ್ಳುತ್ತನೋ ,ಅದುವೇ ಅವನ ದೌರ್ಬಲ್ಯ ಕೂಡ ಆಗಿರುತ್ತೆ .ನಾನೇ ನೋಡಿ, ನನ್ನನ್ನು ನಾನು ತುಂಬಾ ಭಾವುಕ ಅಂದುಕೊಳ್ಳುತ್ತೇನೆ , ಕೆಲವೊಮ್ಮೆ ಆ ಭಾವನೆಗಳೇ ಇಲ್ಲದ ನೋವಿಗೆ ಕಾರಣವಾಗಿಬಿಡುತ್ತೆ .
ಹೀಗೆ ಬದುಕೇ ಭಾವವೆಂದು ಕುಳಿತವನಿಗೆ , ಮನಸಿಗೆ ಬಂದ ಭಾವನೆ ಗಳನ್ನೂ ಇಲ್ಲಿ ಗೀಚಿದ್ದೇನೆ ,ಇದರಿಂದ ನಿಮ್ಮ ಭಾವನೆಗಳಿಗೆ ಬೇಸರವಾಗಿದ್ದರೆ ಕ್ಷಮೆಯಿರಲಿ .
ಇಂತಿ ನಿಮ್ಮ ವಿನಯ

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು