ಬದುಕೇ ದುಸ್ತರವಾದಾಗ ,ಬದುಕು ಬದುಕಬೇಕೆ ?

ಮನುಷ್ಯ ಕೆಲವೊಮ್ಮೆ ದೇವರು ಒಡ್ಡುವ ಪರೀಕ್ಷೆಯಲ್ಲಿ ಅನುತ್ತೀರ್ಣನಾದಾಗ ಹೇಳುವ ಒಂದೇ ಮಾತು ," ನೆಮ್ಮದಿಯಾಗಿ ಬದುಕಲು ಬಿಡುವುದಿಲ್ಲ ಈ ದೇವರು ".
ಆದರೆ ನಾನು ಹೇಳಹೊರಟಿರುವ ಈ ವಿಷಯದಲ್ಲಿ ಇದು ಸ್ವಲ್ಪ ಬದಲಾಗಿದೆ ,"ನೆಮ್ಮದಿಯಾಗಿ ಸಾಯಲು ಬಿಡುವುದಿಲ್ಲ ಈ ದೇವರು ".ಒಮ್ಮೆ ನಿಮಗನ್ನಿಸಬಹುದು ಹುಚ್ಚೇ ಈ ಹುಡುಗನಿಗೆ ,ಎಲ್ಲರೂಬದುಕಲು ಹಂಬಲಿಸುತ್ತಿರುವಾಗ ಈತ ಸಾವಿನ ಬಗ್ಗೆ ಯೋಚಿಸುತ್ತಿದ್ದನಲ್ಲ,ಬಹುಶ ಅವನೇ ಹೇಳಿದಂತೆ ದೇವರು ಕೊಟ್ಟ ಚಿಕ್ಕ ಪರೀಕ್ಷೆಗೆ ಹೆದರಿ ಸಾವಿನೆಡೆಗೆ ಹೊರಟಿರುವನೆ ....?

ಖಂಡಿತ ಇಲ್ಲ ,ಹಾಗೆಂದು ನೀವು ಯೋಚಿಸಿದ್ದೆ ಅದಲ್ಲಿ ನಿಮ್ಮ ಯೋಚನೆ ತಪ್ಪು .ಬದುಕಿನ ನೂರೆಂಟು ಮಜಲುಗಳಲ್ಲಿ ಕೆಲವನ್ನಾದರೂ ನೀವು ಅನುಭವಿಸಿದ್ದಿರಿ ಅಥವಾ ನೋಡಿದ್ದಿರಿ ಅಥವಾ ಕೇಳಿದ್ದಿರಿ ..ಹಾಗೆಯೆ ನಾನು ಕಂಡ ,ಸ್ವಲ್ಪ ಕೇಳಿದ ಬದುಕು ಎಂಬ ಹೊತ್ತಿಗೆಯ ಯಾವೋದು ಪುಟದ ಒಂದು ಪ್ಯಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ,ಹಾಗಂತ ನಾನು ಹೇಳುವುದೇ ಸರಿ ಎಂದಲ್ಲ,ಇದು ಕೇವಲ ವ್ಯಯಕ್ತಿಕ ಅಬಿಮಥ.

ಮನುಷ್ಯನ ಬದುಕೇ ಹಾಗೆ ,ಎರಡು ವಿರುದ್ಧ ಪದಗಳ ನಡುವಿನ ಗುಣಾಕಾರ ,ಆ ಪದಗಳೇ ಹುಟ್ಟು ಮತ್ತು ಸಾವು ,ಗುಣಿಸುವತಾ ಮಾತ್ರ ಆತ .ಇದರಲ್ಲಿ ಹುಟ್ಟು ಅಥವಾ ಜನನ ಎಂಬ ಪದ ಯಾವಾಗಲು ಹಿಥಕರವಾದದ್ದೇ ,ಎಲ್ಲೆಡೆ ಸಂಭ್ರಮ ಉಂಟು ಮಾಡುವ ಪದವದು .
ಸಾವಿನ ಮುಕಗಳು ಸಾವಿರಾರು ,ಪ್ರಮುಖವಾಗಿ ಬರುವುದಾದರೆ ೨ ನ್ನು ಪ್ರಸ್ಥಾಪಿಸಬಹುದು:
೧) ನೈಸರ್ಗಿಕ ಸಾವು
೨) ಸ್ವಯಂ ಶಿಕ್ಷೆ (ಆತ್ಮ ಹತ್ಯೆ )
ಇರುವ ದಂದ್ವ ಇಲ್ಲೇ ,
ವಿಚಾರಕ್ಕೆ ಬರುವ ಮುನ್ನ ನಿಮಗೊಂದು ಚಿಕ್ಕ ಕಥೆ (ನಿಜವಾದುದ್ದೆ ):
ಮೊನ್ನೆ ಊರಿಗೆ ಹೋದಾಗ ಹೀಗೆ ಪಕ್ಕದ ಮನೆಯವರಹತ್ತಿರ ಹರಟುತ್ತ ಕುಳಿತಿದ್ದೆ ,ಹೀಗೆ ಏನೋ ಮಾತಾಡುತ್ತ ಅವರೆಂದರು ನನ್ ತಂಗಿಯ ಅತ್ತೆಗೆ ಜೋರಾಗಿದೆ ಮಾರಾಯ ,ಮಲಗಿದಲ್ಲೇ ಎಲ್ಲ ,ಸ್ನಾನ ಮಾಡಿಸುವುದೇ ಬೇಡವೆಂದಿದ್ದಾರೆ ವೈದ್ಯರು ,ಅದೇನೋ ನೀರಿನ ಹಾಸಿಗೆ ಅಂತೆ ಅದರ ಮೇಲೆ ಮಲಗಿಸುವುದು ,ಮಾತನಾಡಲಾಗುತ್ತಿಲ್ಲ,ಅವರ ಯಾತನೆ ನರಕಕ್ಕಿಂತ ಹೀನಾಯವಾಗಿದೆ.ಅವರು ನೋಡಿದ್ರೆ ಸಾಯೋ ಇಂಜೆಕ್ಷನ್ ಕೊಡ್ಸಿ ಎಂದು ಅಳ್ತಾರಂತೆ ಅಂದ್ರು .
ತೆರೆದ ಮಾತಿಗೆ ನಾನೆಂದೆ ,ಮತ್ಯಾಕೆ ಹಿಂದೆ ಮುಂದೆ ನೋಡ್ಥಿರ ಕೊಡಿಸಲಿಕ್ಕೆ ಹೇಳಿ ,ಅದಕ್ಕೆ ಅವರೆಂದರು ನಾನು ಅದನ್ನೇ ಹೇಳಿದೆ ಮಾರಾಯ ,ಆದ್ರೆ ಹಾಗೆ ಮಾಡಿದ್ರೆ ಇವರಿಗೆಲ್ಲಿ ಪಾಪ ಸುತ್ತಿಕೊಳ್ಳುತ್ತೋ ಅನ್ನೋ ಭಯ ಇವರಿಗೆ ಅಂದ್ರು .

ಮೊದಲು ನನ್ನ ಅಭಿಪ್ರಾಯಕ್ಕೆ ಬರುತ್ತೇನೆ ,
ಆತ ಕರುಣಿಸಿದ ಜೀವ ಆತನೇ ತೆಗೆದುಕೊಳ್ಳಲಿ ಎನ್ನೋ ಭಾವ ನಮ್ಮದು ,ಒಪ್ಪೋಣ .
ಯೋಚಿಸಬೇಕಾದ ವಿಷಯಗಳೆಂದರೆ ಬದುಕು ಬದುಕಾಗಿರದೆ , ನರಕವಾದಕ ನಾವೇ ಅದನ್ನು ತ್ಯಜಿಸುವುದು ತಪ್ಪೇ (ಪ್ರಸಕ್ತ ಸನ್ನಿವೇಶದ ಬಗ್ಗೆ ಮಾತ್ರ ).
ಇಂಥ ಸಮಯದಲ್ಲಿ ಪಾಪ ಪುಣ್ಯದ ಬಗ್ಗೆ ಯೋಚಿಸುವುದು ಎಷ್ಟು ಸರಿ ?
ವ್ಯಕ್ತಿಯಾ ಕ್ರಿಯೆ ಇಂದ ಪಾಪ ಪುಣ್ಯ ನಿರ್ದರಿಸುವುದಾದರೆ , ಆ ಪಾಪ ಅವರೊಟ್ಟಿಗೆ ಹೋಗುವುದಿಲ್ಲವೇ .ಕ್ರಿಯೆ ನಮ್ಮದೇ ಆದರು
ಪ್ರಚೋದನೆ ಅವರದೇ ಅಲ್ಲವೇ ? ಅಂದ ಮೇಲೆ ಎಲ್ಲಿಯ ಪಾಪ , ಎಲ್ಲಿಯ ಪುಣ್ಯ .
ಇಂಥ ಸನ್ನಿವೇಶದಲ್ಲಿ ನಿಮ್ಮ ಅಭಿಪ್ರಾಯವೇನು ?
ಅಂದ ಹಾಗೆ ನೀವು ಇದನ್ನ ಯಾವ ವರ್ಗಕ್ಕೆ ಸೇರಿಸಲು ಇಚ್ಚಿಸುವಿರಿ ?

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು