ಚಪ್ಪಲಿ (ಪಾದುಕೆ ) ಏನು ನಿನ್ನ ಮಹಿಮೆ ?

ಇಂದು ನಮ್ಮೂರಿನಲ್ಲಿ ಚುನಾವಣೆ , ಕಾರಣಾಂತರಗಳಿಂದ ನನಗೆ ಹೋಗಲಾಗಿಲ್ಲ , ಅದರ ಬಗ್ಗೆಯೇ ಯೋಚಿಸುತ್ತಾ ಕುಳಿತಿದ್ದಾಗ ಒಂದು ವಿಷಯ ತಲೆಯಲ್ಲಿ ಬಂತು ಅದನ್ನೇ ನಿಮ್ಮಲ್ಲಿ ಹಂಚಿಕೊಂಡಿದ್ದೇನೆ .ಈ ಬಾರಿ ಚುನಾವಣೆಯಲ್ಲಿ ಭರ್ಜರಿ ಪ್ರಚಾರ ಪಡೆದದ್ದು ಯಾರು ಹೇಳಿ ನೋಡೋಣ , ರಾಜಕೀಯ ಪಕ್ಷಗಳೇ ? ನಾಯಕರೇ ? ಅಥವಾ ಇನ್ನ್ಯಾವುದೋ ಸಂಘ ಸಂಸ್ಥೆಯೇ ? ಖಂಡಿತ ಅಲ್ಲ , ಅದು ನಮ್ಮಾ ಚಪ್ಪಲಿ (ಪಾದುಕೆ ).ಹೌದು ವಿಪರ್ಯಸವೇ ಆದರೂ ನಿಜ ಸಂಗತಿ .ಆದರೂ ಮೆಚ್ಚಲೇ ಬೇಕು ಇದನ್ನ ,ಯಾವುದೇ ಪಕ್ಷ , ಮಾಧ್ಯಮದ ಸಹಾಯವಿಲ್ಲದೆ ಸ್ವತ್ಯಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆದ್ದುಬಿಟ್ಟಿದೆ .ಈ ಬಾರಿ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದು ಚಪ್ಪಲಿ ಎಸೆದಿರುವ ಸನ್ನಿವೇಶಗಳು .ಮಾಮೂಲಿನಂತೆ ನಮಗೆ ವಿದೇಶಿ ಮೋಹ ಅಲ್ಲವೋ ,ಅದಕ್ಕೆ ಇಲ್ಲೂ ಕೂಡ ನಮ್ಮ ಕಥಾ ನಾಯಕ ಮೊದಲು ಹುಟ್ಟಿಕೊಂಡಿದ್ದು ಅಲ್ಲೇ . ಅದು ಅಂತಿಂಥ ದಾಳಿಯಲ್ಲ , ಅಮೆರಿಕೆಯ ಮಾಜಿ ಅಧ್ಯಕ್ಷನ ಮೇಲೆ .ಸ್ವಲ್ಪದರಲ್ಲೇ ಗುರಿ ತಪ್ಪಿತು ಅಷ್ಟೇ .ಈಗ ನಮ್ಮಲಿಗೆ ಬರೋಣ ಮೊದಲ ದಾಳಿ ನಮ್ಮ ಗೃಹ ಸಚಿವರ ಮೇಲೆ , ನಂತರ ಅಡ್ವಾಣಿಯವರ ಮೇಲೆ ........ಕೊನೆಗೆ ನಮ್ಮ ಮುಖ್ಯಮಂತ್ರಿ .ಈಗ ಯಾರು ಯಾರ ಮೇಲೆ ಎಸೆದರು ? ಯಾಕೆ ? ನಮಗೆ ಬೇಡವಾದ ವಿಷಯ .ಮೇಲಿನ ಎಲ್ಲ ಸನ್ನಿವೇಶದಲ್ಲೂ ಒಂದೋ ಆ ವ್ಯಕ್ತಿಯನ್ನು ಖಂಡಿಸಲೋ ಅಥವಾ ಅವನ ಪಕ್ಷವನ್ನ ಖಂಡಿಸಲೋ ಪಾದುಕೆಯ ಬಳಕೆಯಾಗಿದೆ . ಗಮನಿಸಬೇಕಾದ ಅಂಶ ಎಲ್ಲ ಸಂದರ್ಭದಲ್ಲೂ ಪಾದುಕೆಯನ್ನೇ ಯಾಕೆ ಬಳಸಿದ್ದಾರೆ ಎಂದು . ಹಾಗಾದರೆ ಪಾದುಕೆ ಕೆಡುಕು ಉಂಟು ಮಾಡುವಂಥದ್ದೆ,ಅಪಶಕುನದ ಪ್ರತೀಕವೇ .ಹೌದು ಎಂಬುದು ನಿಮ್ಮ ಉತ್ತರವಾದರೆ ನನ್ನದೊಂದಿಷ್ಟು ಪ್ರಶ್ನೆಗಳಿವೆ .ಪಾದುಕೆ ಕೆಡುಕು ಉಂಟು ಮಾಡುವಂಥದ್ದು ಎಂದ ಮೇಲೆ , ದೇವರ ಪಾದುಕೆಗಳನ್ನೇಕೆ ಪೂಜಿಸಬೇಕು ಅಥವಾ ಯಾವುದೊ ಮಠದ ಗುರುವಿನ ಪಾದುಕೆಗಳಿಗೆಕೆ ಅಡ್ಡ ಬೀಳಬೇಕು ? ನಾವಾಗಿ ನಾವೇ ಕೆಟ್ಟದ್ದನ್ನು ಬಯಸಿದಂತಾಗುವುದಿಲ್ಲವೇ?ಅಪಶಕುನದ ಪ್ರತೀಕವೆಂದ ಮೇಲೆ ಅಷ್ಟು ಮೊತ್ತ ವೆಚ್ಚ ಮಾಡಿ ಗಾಂಧೀಜಿಯ ಪಾದುಕೆಗಳನ್ನು ನಮ್ಮಲಿಗೆ ತರುವ ಅವಶ್ಯಕತೆ ಇತ್ತೇ ?(ವಿಜಯ್ ಮಲ್ಯ ತಂದದ್ದು ನೆನಪಿರಬಹುದು ನಿಮಗೆ ).ಇಲ್ಲವೆಂದರೆ ಪಾದುಕೆ ಎಲ್ಲೋ ಒಂದು ಕಡೆ ನಮ್ಮ ಸಂಸ್ಕೃತಿಯ ಭಾಗವೆನ್ನುತ್ತಿರ ?ಸೂಚನೆ :ಇಲ್ಲಿ ಯಾರ ಮನಸ್ಸಿಗೂ ನೋವುಂಟು ಮಾಡುವ ಉದ್ದೇಶ ನನ್ನದಲ್ಲ , ನನಗನ್ನಿಸಿದ್ದನ್ನ ಬರೆದಿದ್ದೇನೆ ಅಷ್ಟೇ .

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು