ಇನ್ನು ಬಾಕಿ ಇದೆ

ನಾನು ಮನೆಗೆ ಫೋನಾಯಿಸಿದಾಗಲೆಲ್ಲ ಊರಿನ ವರದಿ ಎಲ್ಲ ಒಪ್ಪಿಸದಿಲ್ಲದಿದ್ದರೆ ಉಪ್ಪಿನಕಾಯಿ ಇಲ್ಲದ ಊಟ ಮಾಡಿದ ಆಗುತ್ತೆ ನನಮ್ಮನಿಗೆ.ಅವಳು ಎಲ್ಲ ಹೇಳಿ ಮುಗಿಸಿದ ಮೇಲೆ ನಾನು ನನ್ನ ಭಯಂಕರ ತಲೆ ಉಪಯೋಗಿಸಿ ಕೆಲವು ಬಿಟ್ಟಿ ಸಲಹೆ ಬೇರೆ ಕೊಡುತ್ತೀನಿ.ನನಗೂ ಅಷ್ಟೇ ಫೋನ್ ಮಾಡಿದಾಗಲೆಲ್ಲ ಅವಳು ಏನು ಹೊಸ ವಿಷಯ ಹೇಳಿಲ್ಲ ಅಂದ್ರೆ ತಿಗಣೆ ಕಡಿಯದ ರಾತ್ರಿಯ ಹಾಗೆ ಅನ್ಸುತ್ತೆ.ಮೊನ್ನೆ ಹೀಗೆ ಹೇಗಿದ್ದರೂ ಊರಿಗೆ ಹೋಗೋನಿದ್ದೆ ,ಹಾಗೆ ಒಮ್ಮೆ ಫೋನ್ ಮಾಡಿ ಬರುವ ದಿನ ಯಾವತ್ತು ಅಂತ ಹೇಳೋಣ ಅಂತ ಫೋನ್ ಮಾಡಿದೆ.ಆ ಕಡೆ ಇಂದ ಅಮ್ಮನೇ ಇನ್ನೇನು ಕೊನೆ ರಿಂಗ್ ಆಗುತ್ತೆ ಅನ್ನೋವಷ್ಟರಲ್ಲಿ ಪಿ ಟಿ ಉಷಾ ವೇಗದಲ್ಲಿ ಓಡಿಬಂದು ರೀಸಿವ್ ಮಾಡಿ ಹಲೋ ಅಂದ್ರು.ನಾನು ಕಣೆ ಅಂದೇ ಅಷ್ಟೇ , ಮಾತಿಗಾದರೂ ಹೇಗಿದ್ದಿ ಅನ್ನೋ ಬೇಕೋ ಬೇಡೋ ಎ ಆ ಪವಿತ್ರ ಮೊನ್ನೆ ಯಶೋಧನ ಕತ್ತಿ ಹಿಡ್ಕೊಂಡು ಕಡಿಯಲಿಕ್ಕೆ ಹೋಗಿದ್ಲಂತೆ ಅಂದ್ರು.ಮನಸಿನಲ್ಲಿ ನೀನು ಹೋಗಿ ಕೊಡಲಿ ಕೊಡಬೇಕಿತ್ತು ಅಂದುಕೊಂಡ್ರು ಸುಮ್ಮನಾಗಿ ಹೌದ ನಾಡಿದ್ದು ಬರ್ತಿನಲ್ಲ ಅವಾಗ ಮಾತಾಡೋಣ ಅಂದುಬಿಟ್ಟೆ.ಬರುತ್ತಿದ್ದೇನೆ ಅಂತ ಕೇಳಿದ ತಕ್ಷಣ ಆ ವಿಷಯ ಅಲ್ಲಿಗೆ ಕೈ ಬಿಟ್ಟರು ಅಮ್ಮ.ಬಂದ ಮೇಲೆ ನಟನೆ ಮೂಲಕ ವಿವರಿಸೋಣ ಅಂದೋ ಅಥವಾ ಮಗ ಬರುತಿದ್ದಾನಲ್ಲ ಅನ್ನೋ ಖುಷಿ ಇನ್ದಲೋ ಆ ಕ್ಷಣಕ್ಕೆ ಹೊಳೆಯಲಿಲ್ಲ.

ಮನೆಗೆ ಹೋದ ಮೇಲೆ ಅದು ಇದು ಮಾತು , ತಿನ್ನೋದು ಅಂತ ಈ ವಿಷಯ ಮರೆತೇ ಹೋಗಿತ್ತು ನನಗೆ.ಅಮ್ಮನಿಗೂ ಅಷ್ಟೇ ಬೇರೆಯಲ್ಲ ನೆನಪಿದ್ದರು ಇದು ಅದು ಹೇಗೆ ಮರೆತು ಹೋಗಿತ್ತೋ ನಾ ಕಾಣೆ.ಮಧ್ಯಾನ ೧೧.೦೦ ರ ಸಮಯ ಜಡಿ ಮಳೆ ,ಅಪ್ಪ ಪೇಟೆಗೆ ಹೋಗಿದ್ರು.ನಾನು ಇರೋಬರೋ ಗೇರು ಬೀಜ,ಹಲಸಿನ ಬೀಜ ಒಟ್ಟಾಕಿಕೊಂಡು ಸುಡುತ ಕುಳಿತಿದ್ದೆ. ಆ ಕಡೆ ಒಂದು ಧ್ವನಿ ಗೀತಮ್ಮ ಅಂತ ಕೇಳಿಬಂತು ,ನೋಡಿದ್ರೆ ಪಕ್ಕದ ಮನೆ ಕೆಲಸ ಮಾಡುವ ನಾಗರತ್ನ.ಅವರ ಮನೆಯಲ್ಲಿ ಎಲ್ಲ ಎಲ್ಲೋ ಊಟದ ಮನೆಗೆ ಹೋಗಿದಾರೆ ಅಂತ ನೀರು ಕುಡಿಯೋಕೆ ಇಲ್ಲಿಗೆ ಬಂದಿದ್ದಳು.ಅವಳನ್ನ ನೋಡಿದ್ದೇ ತಡ ಅದೇನೋ ನೆನಪಾಯಿತೋ ಅಮ್ಮನಿಗೆ ದೊಡ್ಡ ಧ್ವನಿಯಲ್ಲಿ ಎ ನಿನಗೆ ಹೇಳಲೇ ಇಲ್ಲ ನೋಡು ಅಂತ ಒಮ್ಮೆ ಮನೆಯೇ ಮುಳುಗಿ ಹೋಯಿತು ಅನ್ನೋ ಧ್ವನಿ ಅಲ್ಲಿ ಹೇಳಿದರು.ಅವರ ಆ ಕೂಗು ನನ್ನನ್ನು ಒಮ್ಮೆ ಕುಮ್ಹುಟಿ ಬಿಳುವಂತೆ ಮಾಡಿದ್ರೆ , ಓಲೆ ಒಳಗಿದ್ದ ಗೇರು ಬೀಜ ದೀಪಾವಳಿಯ ಗರ್ನಲ್ ತರ ಡಬ್ ಅನ್ನೋ ಶಬ್ದ ಮಾಡಿ ಹಾರ್ಟ್ ಅಟ್ಯಾಕ್ ಅದೋನ ಮುಂದೆ ಬಾಂಬ್ ಸಿಡಿಸಿದ ಹಾಗಾಯಿತು.
ಅಂತು ಈ ಹಠಾತ್ ದಾಳಿಯಿಂದ ಸುಧಾರಿಸಿಕೊಂಡು ಒಂದು ಗುಟುಕು ಕಾಫಿ ಹಿರಿ ಕೂತೆ. ನೋಡಿ ಶುರುವಾಯಿತು 'her'story. ಅಮ್ಮ ಒಬ್ಬಳೇ ಆಗಿದ್ರೆ ಆಮೇಲೆ ಹೇಳೇ ಅಂತ ಸುಮ್ಮನಾಗ ಬಹುದಿತ್ತು , ಈಗ ಹಾಗಲ್ಲ ಪ್ರತ್ಯಕ್ಷದರ್ಶಿ ನಾಗರತ್ನ ಬೇರೆ ಇದಾಳೆ. ದುಶ್ಯಾಸನ ರಕ್ತ ತರದ ಹೊರತು ಜಡೆ ಕಟ್ಟಲ್ಲ ಅನ್ನೋ ದ್ರೌಪತಿ ಶಪಥದ ಹಾಗೆ ಕೈ ಅಲ್ಲಿ ಇದ್ದ ಪಾತ್ರೆ ಅಲ್ಲೇ ಬದಿಗೆ ಇಟ್ಟು ಪೂರ್ತಿ ಕತೆ ಮುಗಿಯದ ಹೊರತು ತಾನು ಎಳೋಲ್ಲ ಅಂತ ಅಮ್ಮ ನಿಶ್ಚಿಸಿದ ಹಾಗಿತ್ತು.ಸಭೆ ಸಮಾರಂಭಗಳಲ್ಲಿ ಮಾಡೋ ಸ್ವಾಗತ ಭಾಷಣದಂತೆ ಮೊದಲು ಅಮ್ಮನೇ ಶುರು ಹಚ್ಚಿಕೊಂಡ್ರು. ಅದೇ ಮಂಜನ ಹೆಂಡ್ತಿ ಯಶೋಧ ಗೊತ್ತಲ್ಲ ನಿನಗೆ ಅವಳಿಗೂ ಕಿಟ್ಟನ ಹೆಂಡ್ತಿ ಪವಿತ್ರಗೂ ಮೊನ್ನೆ ಭಟ್ರ ದರ್ಕಸ್ಸಿನಲ್ಲಿ ಮಾರಮಾರಿಯಂತೆ ಕಣೋ.ಪವಿತ್ರ ಅಂತು ಯಶೋಧನ ಕಡಿಯಲಿಕ್ಕೆ ಹೊಗ್ಲಿದಂತೆ ಅಂತ ಹೇಳಿ over to ನಾಗರತ್ನ ಅನ್ನೋ ತರ ತಮ್ಮ ಪ್ರಾಸ್ತಾವಿಕ ಭಾಷಣ ಮುಗಿಸಿ ಅವಳ ಕಡೆ ನೋಡಿದ್ರು.

ದೇಶಕ್ಕೆ ಸ್ವಂತಂತ್ರ ತಂದುಕೊಡೋಕೆ ಹೊರತು ನಿಂತ ಯೋಧರಂತೆ ಶುರುವಾಯಿತು ಅವಳ ಮಾತು. ಈ ಹಡಬೆ ಮುಂಡೆಯೋಕೆ ಬೇರೆ ಕೆಲಸ ಇಲ್ಲ ಕಣ್ರೀ ಮಾಣಿ,ದಿನ ಇವರದ್ದು ಇದ್ದಿದ್ದೇ. ಯಪ್ಪಾ ಏನು start ಇದು , ಪಟ್ಟಣಕ್ಕೆ ಬಂದ ಮೇಲೆ ಸ್ವಲ್ಪ ತಿಳಿದವರು ಅಂದ್ರೆ ಅದೇ ನಾಗರೀಕರು ಅನ್ನೋವವರ ಜೊತೆ ಸೇರಿ ಇಂತ ಪದವೆಲ್ಲ ಹಾಗೆ ಬಳಸಬಾರದು ಅಂತ ತಿಳಿದಿದ್ದೆ.ಈಗ ಇವಳು ಅದೇ ಪದವನ್ನು ಹೇಳಿದ್ದರಿಂದ ಅದರ ಬಗ್ಗೆ ಒಂದು lecture ಕೊಡೋಣ ಅಂತ ಮನಸಾದರು ಅದರಿಂದ ಪ್ರಯೋಜನವಿಲ್ಲ ಅಂತ ತಿಳಿದು ಸುಮ್ಮನಾದೆ.ಅದು ಅಲ್ದೆ ಇದಕ್ಕಿಂತ ಉತ್ತಮ ಶ್ರೇಣಿಯ ಪದಗಳು ನನ್ನ ಬಾಯಲ್ಲಿ ನೀರು ಕುಡಿದದಷ್ಟು ಸಲೀಸಾಗಿ ಬರುತ್ತಿದಿದ್ದು ಈಗ ಕಡಿಮೆ ಆಗಿದ್ದು ನೋಡಿ ಎಲ್ಲಿ ಅಜ್ಞಾನಿ ಆಗ್ತಾ ಇದ್ದಿನೋ ಅಂತ ಭಯ ಬೇರೆ ಆಯಿತು. ನನ್ನೀ ಕ್ಷಣದ ಯೋಚನೆಯನ್ನ ಬೇಧಿಸಿ ಅವಳೇ ಮುಂದುವರೆಸಿ ಹೇಳಿದಳು ಅಲ್ಲ ಮಾಣಿ ನೀವೇ ಹೇಳಿ ಇವರಿಗೆ ಭಟ್ರು ಮನೆ ಕೆಲಸಕ್ಕೆ ಬಂದಾಗ ಮುಚ್ಕೊಂಡು ಅವರು ಹೇಳಿದ್ದು ಮಾಡೋದು ಬಿಟ್ಟು ಬೇರೆ ಉಸಾಬರಿ ಯಾಕೆ. ನಾನೇನು ಹೇಳಲಿ ಮುಚ್ಕೊಂಡು ಇರಿ ಅಂತಾನ ? ಹು ಹು ಅಂತ ತಲೆಯಾಡಿಸಿದೆ,ಇಲ್ಲದಿದ್ದರೆ ಅವಳಿಗೆ ಮಾತು ಮುಂದುವರೆಸೋಕೆ mood ಇರೋಲ್ಲ.

ದರ್ಕಸ್ ಅಲ್ಲಿ ಕಾಫಿ ಚಿಗುರು ಚಿವುಟಕ್ಕೆ ಹೇಳಿ ಪೇಟೆ ಕಡೆ ಹೋದ್ರು. ಇವೆಡಕ್ಕೆ ಬೆಳಗಿಂದ ಅದೆಲ್ಲಿ ಕಡಿತಾ ಇತ್ತೋ ಗೊತ್ತಿಲ್ಲ ಸುಮ್ಮನೆ ಚಿಗುರು ಚಿವುಟುತ ಇದ್ದೋರು ನಿಂದ ಏನೇ,ನಿಂದ ಏನೇ ಶುರು ಹಚ್ಚಿಕೊಳ್ಳಬೇಕೆ. ನಾವದ್ರು ಏನ್ ಮಾಡೋಕೆ ಆಗುತ್ತೆ.ಮಧ್ಯೆ ಬಾಯಿ ಹಾಕಿದ್ರೆ ದಾರಿಯಲ್ಲಿ ಹೋಗ್ತಾ ಇರೋ ಹಾವನ್ನು ಮೈ ಮೇಲೆ ಹಾಕಿಕೊಂಡ ಹಾಗೆ ಆಗುತ್ತೆ ಅಂತ ತನ್ನ ಅಸಹಾಯಕತೆಯನ್ನು ತೋಡಿಕೊಂಡಳು. ನಾನು ಇಲ್ಲೇ ಇದೀನಿ ಅಂತ ತೋರಿಸೋಕೆ ಮಧ್ಯ ಅಮ್ಮ ಬಾಯಿ ಹಾಕಿ ಅವತ್ತು ಅಪ್ಪ ಮನೇಲೆ ಇದ್ರೂ ಕಣ ಅಂದ್ರು. ಅವಳೇ ಮುಂದುವರೆಯುತ್ತಾ ಅವರ dictionary ಪದಗಳನ್ನು ಬಿಚ್ಚಿಡ ತೊಡಗಿದಳು.ಶುರುವಾಯಿತು ನೋಡಿ ಬೈಗುಳ ,ಹಡ್ ಬಿಟಿ ರಂಡೆ ನಿನ್ನ ತರ ನಿನ್ ತರ ಕಂಡೋರ್ ಹತ್ರ ಎಲ್ಲ ನಾನು ಹಲ್ ಕಿರಿತ ಇರೋಲ್ಲ , ನಾ ಕಂಡಿಲ್ವಾ (ಏನು ?) ನಿನ್ನ ಮಗಳನ್ನ ಬೆಳಿಗ್ಗೆ ಪ್ಯಾಟಿಗೆ ಹೋಗಿ ರಾತ್ರಿ ಬರ್ತಾಳ ಅದೇನು ಕಸರತ್ ನಡ್ಸ್ತಾಲೋ ಆ ಶುರ್ಪಣಕಿ , ಚಿನಾಲಿ , ಯಾರಿಗೆ ಹುಟ್ಟಿದ್ದೋ ಏನೋ' (ಅಬ್ಬ), ಇಷ್ಟು ಹೇಳಿದ ಮೇಲೆ ಅವಳು ಸುಮ್ಮನೆ ಇರ್ತಾಳ 'ಸಾಕು ಸುಮ್ಮ ನೀರೆ ಏನು ಎಲ್ಲ ಕಂಡೋರ್ ತರ ಹೇಳಬೇಡ (ಎಲ್ಲ ಅಂದ್ರೆ ?) ನನಗೇನು ಗೊತ್ತಿಲ್ಲ ಅಂತ ಅನ್ಕೊಂಡಿದ್ದಿಯ,ರಾತ್ರಿ ಅದ್ಯಾರ್ ಜೊತೆ ಬಿದ್ಕೊತ್ಯೋ , ಗಂಡ ಅನ್ಸ್ಕೊಂಡ ಬೇರೆ ಬೇರೆ ನಾಮರ್ದ ..........' (ಯಪ್ಪಾ) ಈ ಕಡೆಯವಳಿಗೆ ಇನ್ನು ಸುಮ್ಮನಿರಲಾಗದೆ ಕೈ ಅಲ್ಲಿ ಇದ್ದ ಕತ್ತಿನೆ ಹಿಡ್ಕೊಂಡು ಏನೇ ಅಂದಿ ಯಾರು ಸೂಳೆ ಅಂತ ಕಡಿಯಲು ಮುನ್ನುಗ್ಗಿಯೇ ಬಿಟ್ಟಳು. ಅಷ್ಟರಲ್ಲಿ ವಜ್ರಮನಿಯನ್ನು ಕೊಲ್ಲಲು ಹೊರಟ ವಿಷ್ಣುವರ್ಧನ್ಗೆ slow motion ಅಲ್ಲಿ ಓಡಿ ಬಂದು ಬೇಡ ಅನ್ನೋ ಲೀಲಾವತಿ ತರ ಇವರೆಲ್ಲ entry ಆಗಿ ಆಗಬಹುದಾಗಿದ್ದ ಅನಾಹುತ ತಪ್ಪಿಸಿದ್ದಾರೆ. ಇಷ್ಟು ಹೇಳಿ ಮುಗಿಸೋದ್ರೋಳಗಾಗಿ ಎದುರಿಗಿದ್ದ ಒಂದು ಚೊಂಬು ನೀರು , ಒಂದು ದೊಡ್ಡ ಬೆಲ್ಲದ ಉಂಡೆ ಅವಳ ಹೊಟ್ಟೆ ಸೇರಾಗಿತ್ತು. ಪುಸ್ತಕ ಬರೆದ ಮೇಲೆ ಅದರ ಬಗ್ಗೆ ವಿಮರ್ಶೆ ಮಾಡಲು ವಿಮರ್ಶಕರಿಗೆ ಕೊಡುವಂತೆ ಅವಳದೆಲ್ಲ ಒದರಿ ಆದ ಮೇಲೆ ನಿಮ್ಮ ಅಭಿಪ್ರಾಯವೇನು ಅನ್ನೋ style ಅಲ್ಲಿ ಅಮ್ಮನ ಕಡೆ ನೋಡಿದಳು.

ತನ್ನೆಲ್ಲ ಬುದ್ಧಿ ಬಳಸಿ ಒಳ್ಳೆ ವಿಚಾರವಾದಿಗಳ ತರ ದೀರ್ಘ ಉಸಿರು ಎಳೆದುಕೊಂಡು ಎದ್ರುರಿಗೆ ಕುತೊಳೆ ಅಪರಾಧಿ ಅನ್ನೋ ಸ್ಟೈಲ್ ಅಲ್ಲಿ ನಾಲ್ಕು ಬುದ್ಧಿ ಮಾತು ಹೇಳಿ , ನಿಮ್ಮ ತೀರ್ಮಾನವೇನು ಅಂತ ನ್ಯಾಯಧಿಷರನ್ನು ನೋಡೋ ತರ ನನ್ನ ಕಡೆ ನೋಡಿದಳು ಅಮ್ಮ.ನಾನು ಬಾರಿ ತಿಳಿದವನಂತೆ ನಾಲ್ಕು ಅವರಿಗೆ ಅರ್ಥ ಆಗದ ದೊಡ್ಡ ದೊಡ್ಡ ನಾಲ್ಕು ಪದ ಉದುರಿಸಿದೆ.ಪದ ದೊಡ್ಡದಿದ್ದ ಏನೋ ಮಾಣಿ ಏನೋ ಭಾರಿ ಒಳ್ಳೆ ಮತ್ತೆ ಹೇಳಿದ್ರು ಅಂತ ಅವರು ಹು ಗುಟ್ಟಿದರು. ವಾಪಸ್ ಬಂದ ಮೇಲೆ ಮತ್ತೆ ಊರಿಗೆ ಫೋನ್ ಮಾಡಿದ್ದಾಗ ಅಮ್ಮ ಹೇಳ್ತಾ ಇದ್ದರೂ , ಆ ಜಗಳ ಅಲ್ಲಿಗೆ ನಿಲ್ಲದೆ ನೀರು ತಗೊಂಡು ಹೋಗಲು ಬಂದ ಯಶೋಧ್ಲ ಮಗಳಿಗೆ ಪವಿತ್ರ ಬಾಂಡ್ ಸ್ಟೈಲ್ ಅಲ್ಲಿ ಹಿಗ್ಗ ಮುಗ್ಗ ಹೇರಿದ್ದಾಳೆ ಅಂತ. ಹಾಗೆ ಮುಂದಿನ ಬಾರಿ ಊರಿಗೆ ಬಂದಾಗ ವಿವರಿಸುವುದಾಗಿಯು

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು