"ಆಪರೇಷನ್ ಬೆಡ್ ಬಕ್ಸ್"

ನನಗೂ ನೋಡಿ ನೋಡಿ ರೋಸಿ ಹೋಗಿತ್ತು.ಹೀಗೆ ಮುಂದುವರೆದರೆ ಸತ್ತಮೇಲೆ ನನ್ನ ಜೀವವನ್ನು ಪೋಸ್ಟ್ಮಾಟಂ ಮಾಡೋದು ಕಷ್ಟ ಅಂತ ಅನ್ಕೊಂಡು ಇವಕ್ಕೊಂದು ಗತಿ ಕಾಣಿಸಲೇ ಬೇಕು ಅಂತ ಮನಸಿನಲ್ಲೇ ನಿಶ್ಚಯಿಸದೆ.ಆದರೆ ಅದು ಅಷ್ಟು ಸುಲಭದ ಮಾತಾಗಿರಲಿಲ್ಲ.ನೇರ ಯುದ್ದಕ್ಕೆ ಬರುವವರನ್ನಾದರೆ ಹೇಗೋ ಎದುರಿಸಬಹುದು,ಆದರಿವು ಗೆರಿಲ್ಲಾ ಮಾದರಿಯ ದಾಳಿ ಮಾಡುತಿದ್ದವು.ಯಾವಾಗ? ಎಲ್ಲಿಂದ? ಹೇಗೆ? ಬಂದು ಕಡಿಯುತಿದ್ದವೋ ಹೇಳೋದು ಕಷ್ಟ ಆಗಿತ್ತು.ಈಗ ನಾನು ಮೊದಲು ಈ ಗೆರಿಲ್ಲಾ ಯುದ್ದ ತಂತ್ರಗಳನೆಲ್ಲ ಅರಿಯಬೇಕಿತ್ತು.ಅದಕ್ಕೂ ಮೊದಲು ಈ ಕಾರ್ಯಚರೆಣೆಗೆ ಒಂದು ಹೆಸರನ್ನು ಬೇರೆ ಸುಚಿಸಬೇಕಿತ್ತು.ಅಂದರೆ ಆಪರೇಷನ್ ತ್ರಿಶುಲ್ , ಆಪರೇಷನ್ ಅದು ಇದು ಅಥವಾ ಆ ಬಿರುಗಾಳಿ ಈದು ಅಂತ ಎಲ್ಲ ಹೆಸರಿಡುತ್ತಾರಲ್ಲ ಹಾಗೆ.ಹೆಸರಿಲ್ಲದೆ ನಾನು ಯುದ್ದ ಮಾಡಿ ಗೆದ್ದು ನಾಳೆ ಏನು ಮಾಡಿದೆ ಅಂತ ಯಾರಾದ್ರೂ ಕೇಳಿ ಅದಕ್ಕೆ ನಾನು ಮಧ್ಯರಾತ್ರಿ ಹಾಸಿಗೆ ಅಲ್ಲಿ ತಿಗಣೆ ಕೊಂದೆ ಅಂದ್ರೆ ಅಪಾರ್ಥ ಮಾಡಿಕೊಂಡುಬಿಡುತ್ತಾರೆ.ಅಂತು ೨ ದಿನದ ಸತತ ಯೋಚನೆ ನಂತರ ಒಂದು ಹೆಸರು ಹೊಳೆಯಿತು, ಅದುವೇ "ಆಪರೇಷನ್ ಬೆಡ್ ಬಕ್ಸ್" (ಹೇಗಿದೆ?).

ಒಂದು ಈಗಲೇ ಸ್ಪಷ್ಟ ಪಡಿಸುತ್ತೇನೆ ನಾನು ಏಕಾಏಕಿ ಯುದ್ಧ ಘೋಷಣೆ ಮಾಡಿರಲಿಲ್ಲ.ಮತ್ತೆ ನೀವು ಹಾಗೆ ಎಂದುಕೊಂಡು ವಿಶ್ವಸಂಸ್ಥೆ ಮುಖಾಂತರ ನಮ್ಮ ಮೇಲೆ ಒತ್ತಡ ಹೇರಬಾರದು.ನಾನು ಈ ಹೊಸ ರೂಂಗೆ ಬಂದು ಸೇರಿದ ದಿನದಿಂದಲೇ ಇವು ತಮ್ಮ ಕಾರ್ಯಾಚರಣೆ ಆರಂಭಿಸಿದ್ದವು.ಹೊಸ ರೂಂ ಆದ್ಧರಿಂದ ನನಗೂ ಅದರ ಅಷ್ಟು ಅನುಭವವಾಗಿರಲಿಲ್ಲ.ಬರುಬರುತ್ತಾ ನನಗೆ ಈ ಬೆಡ್ ಬಾಕ್ಸ್ (ತಿಗಣೆ)ಗಳ ಬಗ್ಗೆ ಅರಿವುನ್ಟಾಗಿದ್ದು. ಹಾಗಂತ ನಾನು ಅವುಗಳ ಮೇಲೆ ಏಕಾಏಕಿ ದಾಳಿ ಮಾಡಲಿಲ್ಲ,ನನ್ನಲ್ಲೂ ಕರುಣೆ ಇದೆ. so ದಿನಕ್ಕೆ ೨-೩ ಬಂದು ಅವಕ್ಕೆ ಬೇಕಾದಷ್ಟು ರಕ್ತ ಕುಡಿದುಕೊಂಡು ಹೋಗಲಿ ಎಂದು ಸುಮ್ಮನಿದ್ದೆ.ಪಾಪ ಅವು ಬದುಕಬೇಕಲ್ಲ.ಆದರೆ ಇವು ಒಂದಗಳು ಕಂಡಾಕ್ಷಣ ತನ್ನ ಪೂರ್ತಿ ಪರಿವಾರವನ್ನೆಲ್ಲ ಕರೆಯುವ ಕಾಗೆಯ ತರ ತನ್ನ ಪೂರ್ತಿ ಪರಿವಾರವೆನೆಲ್ಲ ಕರೆದುಕೊಂಡು ಬರುವುದೇ.ನೀವೇ ಹೇಳಿ ನನ್ನದೇನು Blood bank ಏ ಇವು ಬಂದಾಕ್ಷಣ ಎತ್ತಿ ಕೊಡೋಕೆ.ಆದರೂ ನಾನು ತಾಳ್ಮೆ ಕಳೆದುಕೊಳ್ಳದೆ ಅವುಗಳನ್ನು ನಿಯಂತ್ರಿಸುವ ಉಪಾಯ ಮಾಡುತಿದ್ದಾಗಲೇ ನನ್ನ ಮಿತ್ರರೊಬ್ಬರು ಹೇಳಿದರು ಅವನ್ನು ಹಿಡಿದು ನೀರಿಗೆ ಹಾಕು ನಿಧಾನವಾಗಿ ಕಡಿಮೆ ಆಗುತ್ತವೆ ಎಂದು.ಅವರು ಹೇಳಿದಂತೆ ಮಾಡಿದೆ ಒಂದೆರಡು ದಿನ ಚೆನ್ನಾಗೆ ಇತ್ತು.ಹತ್ತಿರದಲ್ಲೇ ಬಸವನಗುಡಿ ಈಜುಕೊಳ ಇರುವುದರಿಂದಲೋ ಏನೋ ೪ನೇ ದಿನದ ಹೊತ್ತಿಗೆ ಎಲ್ಲ ತಿಗಣೆಗಳು ಈಜಲು ಶುರು ಮಾಡಿಬಿಡುವುದೇ.ನನಗನ್ನಿಸುತ್ತೆ ಅವುಗಳ ಇರಾಕ್ ಇಂದಲೇ ಬಂದು ಇಲ್ಲಿ ನೆಲೆಸಿರಬೇಕು ಇಲ್ಲದಿದ್ದರೆ ಅಷ್ಟು ಕಡಿಮೆ ಅವಧಿಯಲ್ಲಿ ದಾಳಿಗೆ ಪ್ರತಿ ದಾಲೆ ಹೂಡಲು ಬೇರೆ ಯಾರಿಂದಲೂ ಸಾಧ್ಯವಿರಲಿಲ್ಲ. ಇದನ್ನು ಪುಷ್ಟಿಕರಿಸುವಂತೆ ಅವು ಶುರು ಮಾಡಿದ್ದೆ ಗೆರಿಲ್ಲಾ ಮಾದರಿಯ ಯುದ್ದ. ಮಲಗುವ ಮುಂಚೆ ಇಡಿ ತಡಿ ಹುಡುಕಿದರೂ ಒಂದು ಸಿಗುತ್ತಿರಲಿಲ್ಲ ಆದರೆ ಮಧ್ಯರಾತ್ರಿ ಹೊತ್ತಿಗೆ ಅದೆಲ್ಲಿಂದ ಬಂದು ಬಿಡುವುತಿದ್ದವೋ ತಿಳಿಯದು.ತಕ್ಷಣ ಎದ್ದು ಲೈಟ್ ಹಾಕಿದರೆ ಮತ್ತೆ ಮಂಗಮಾಯ.ಇಷ್ಟೆಲ್ಲಾ ಅದ ಮೇಲೆ ನಾನು ಯುದ್ಧ ಘೋಷಿಸಿದ್ದು.

ಇದೆಂತ ಕಠಿಣ ಶಿಕ್ಷೆ ದೊರೆತರು ಪರವಾಗಿಲ್ಲ ಅವುಗಳ ಸಜೀವ ದಹನ ಮಾಡೇ ತೀರುತ್ತೇನೆ ಎಂದು.ಹಾಗೆ ಮಾಡಬೇಕೆಂದರೆ ಮೊದಲು ನಾನು ಅವುಗಳ ಮೇಲೆ ಒಂದು ಕಣ್ಣು ಇಡಬೇಕಾಗಿತ್ತು.ಅಂತು ಸರಿಯಾಗಿ ೧ -೧.೩೦ ರ ಸುಮಾರಿಗೆ ಅವು ನನ್ನ ಹಾಸಿಗೆಯ ಬಳಿ ಬರುತ್ತವೆ ಅನ್ನೋದನ್ನ ತಿಳಿದುಕೊಂಡೆ. ಅಂದರೆ ಅಂದಾಜು ೧೨.೪೫ ಕ್ಕೆ ಸರಿಯಾಗಿ ನಾನು ಎದ್ದು ಕಾರ್ಯೋನ್ಮುಖವಾಗ ಬೇಕು.ಹಾಗಂತ ಅಲಾರಂ ಇಡುವಹಾಗಿರಲಿಲ್ಲ.ಅಂತು ೫ ದಿನದ ಪ್ರಯತ್ನದ ನಂತರ ಕೆಟ್ಟ ಕನಸು ಬಿದ್ದಾಕ್ಷಣ ಸಡನ್ ಆಗಿ ಏಳೋ ಹೀರೋಯಿನ್ ತರ ಸರಿಯಾದ ಸಮಯಕ್ಕೆ ಏಳೋ ನನ್ನ ಪ್ರಯತ್ನ ಸಫಲವಾಯಿತು.ಆಯುಧ ಅಂತ ಅಂಗಡಿಗೆ ಹೋಗಿ ೧೨ ರುಪಾಯಿಯ ದೊಡ್ಡ ಮೊಂಬತ್ತಿ ಮತ್ತು ೧ ಬೆಂಕಿ ಪೊಟ್ಟಣ ತಂದಿರಿಸಿದೆ.

ಪಕ್ಕದಲ್ಲೇ ಇರುವ ಜೋತಿಷ್ಯಾಲಯಕ್ಕೆ ಹೋಗಿ ಸದ್ಯಕ್ಕೆ ಯಾವುದೇ ಕಂಟಕವಿಲ್ಲವೆಂದು ಖಾತ್ರಿ ಪಡಿಸಿಕೊಂಡು,ಹಾಗೆ ಒಂದು ಒಳ್ಳೆ ದಿನವನ್ನು ಗೊತ್ತು ಮಾಡಿಕೊಂಡು ಬಂದೆ. ಅವಮಾಸ್ಯೆ ರಾತ್ರಿ ಬೇರೆ ಸಂಪೂರ್ಣ ಕತ್ತಲು ನಾನಂದು ಕೊಡಿದ್ದಕಿಂತ ೧೦ ನಿಮಿಷ ಮೊದಲೇ ಎಚ್ಚರವಾಯಿತು. ಪಕ್ಕದ ಬಿದಿಯಲ್ಲೆಲ್ಲೋ ಗೀಳು ಇಡುತಿದ್ದ ನಾಯಿ ನಮ್ಮ ಈ ಸಮರಕ್ಕೆ ಕಹಳೆ ಉದಿ start ಅನ್ನೋ ಸಿಗ್ನಲ್ ಬೇರೆ ಕೊಡ್ತು.ಉಳಿದಿರುವ ಸಮಯ ಅವುಗಳ ಚಲನಾ ವೇಗ ಎಲ್ಲವನ್ನು ಲೆಕ್ಕ ಹಾಕಿ ಅವಿನ್ನು ಗೋಡೆಯಿಂದ ಕೆಳಗೆ ಇಳಿಯುತ್ತಿರಬೇಕೆಂದು ನಿರ್ಧರಿಸಿ ಪಕ್ಕದಲ್ಲೇ ಇಟ್ಟಿದ್ದ ಮೊಂಬತ್ತಿ ಮತ್ತು ಕಡ್ಡಿ ಪಟ್ಟಣ ಅಲ್ಲೇ ಇದ್ಯ ಅಂತ ಖಚಿತಪಡಿಸಿಕೊಂಡೆ. ಸರಿಯಾದ ಸಮಯಕ್ಕೆ ಟ್ಯೂಬ್ ಲೈಟ್ ಹಾಕಿ , ಮೊಂಬತ್ತಿ ಹಚ್ಚಿಕೊಂಡು ಸಿಕ್ಕ ಸಿಕ್ಕ ತಿಗಣೆಗಳೆಲ್ಲವನ್ನು ಹಾಗೆ ಸಜೀವ ದಹನ ಮಾಡಿ ನಂತರ ಬೆಡ್ನ ಬಕ್ಸಿ ಅದರ ಹಿಂದೆ ಅಡಗಿದ್ದ ಎಲ್ಲವನ್ನು ಕ್ಷಣ ಮಾತ್ರದಲ್ಲಿ ಸಂಹರಿಸಿದೆ. ರೂಂ ತುಂಬಾ ಸ್ಮಶಾನ ಮೌನ.ಆ ಸ್ಮಶಾನದಲ್ಲೇ ಮಲಗಿ ಬೆಳಿಗ್ಗೆ ಎದ್ದಾಗಲೇ ಗೊತ್ತಾಗಿದ್ದು ತಿಗಣೆ ಸಂಹರಿಸುವ ಬರದಲ್ಲೇ ಬೆಡ್ ನ ಒಂದು ಭಾಗವನ್ನು ಸುಟ್ಟುಹಾಕಿದ್ದೆ ಅಂದು.ಅದಾದಮೇಲೆ ಸಧ್ಯಕ್ಕೆ ಅವುಗಳ ಕಾಟವಿಲ್ಲ.ಆದರೆ ಹೇಳೋದು ಕಷ್ಟ ಈಗಾಗಲೇ ಸದ್ಧಾಂ ನೊಣವಾಗಿ ಬಂದು ಹೋಗಿದ್ದಾನೆ ಅನ್ನೋ ಸುದ್ದಿ ಇದೆ , ಇನ್ನೆಂದು ತಿಗಣೆಯಾಗಿ ಬರುತ್ತಾನೋ ತಿಳಿಯದು.

ಇಂತಿ

ವಿನಯ

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು