ಚುಟುಕು-ಚುರುಮುರಿ
ಸಂಕಟ:
ಕರಳು ಕಿವುಚಿ ಬಂದಿತು
ಸಮಾಧಾನಕೆಂದು ಆಕೆ
ಚಿನ್ನದ ಸರವ ಕೇಳಿದಾಗ
ಕರುಳಿಗೆ ನನ್ನ ನೋವು ಮೊದಲೇ
ಗೊತ್ತಾಯಿತೆಂದು ಆಗ ತಿಳಿಯಿತು
ಸುಖ:
ಒಬ್ಬೊಬ್ಬರಿಗೆ ಒಂದೊಂದರಲ್ಲಿ
ಒಂದೊಂದು ಸುಖ
ಹಂದಿಗೆ ಕಸದಲ್ಲಿ
ನಾಯಿಗೆ ಬೂದಿಯಲ್ಲಿ
ಎಮ್ಮೆಗೆ ಕೊಳಚೆ ನೀರಿನಲ್ಲಿ
ಮನುಷ್ಯನಿಗೆ ಇವೆಲ್ಲವನ್ನ
ಸಾಕುವುದರಲ್ಲಿ
ವೇದಾಂತ :
ಅಂದಿದ್ದರೂ ವೇದಾಂತಿಗಳು ಅಂದು
ಕೂಡಿಟ್ಟ ಕಾಸು ಚಿತೆ ಏರುವ ತನಕವೆಂದು
ಹೇಳುವೆನು ನಾನಿಂದು ಕೂಡಿಡಿ
ಸ್ವಲ್ಪ ಕಾಸು, ಇಲ್ಲದಿದ್ದರೆ
ಚಿತೆ ಏರುವ ನಿಮ್ಮ ಕನಸು
ಭಗ್ನವಾಗಬಹುದಿಂದು
ವಿನಯ್,
ಪ್ರತ್ಯುತ್ತರಅಳಿಸಿಕವನಗಳು ತುಂಬಾ ಸರಳವಾಗಿದ್ದರೂ ಆಸಕ್ತಿಕರವಾಗಿವೆ...
chennagide vinay.. artagarbhitavaagive saalugaLu
ಪ್ರತ್ಯುತ್ತರಅಳಿಸಿವಿನಯ್ ಮೂರೂ ಕವಿತೆಗಳು ವಿಭಿನ್ನ , ಆದರೂ ಚೆನ್ನಾ , ಮುಂದುವರೆಯಲಿ ನಿಮ್ಮ ಕವಿತೆಗಳು ಇನ್ನೂ .
ಪ್ರತ್ಯುತ್ತರಅಳಿಸಿಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]
"ಸುಖ" ತುಂಬಾ ಇಷ್ಟವಾಯ್ತು...ಸರಳ,ಸುಂದರ....ಬರೆಯುತ್ತಿರಿ..
ಪ್ರತ್ಯುತ್ತರಅಳಿಸಿನಮಸ್ತೆ..